ತನ್ನ ಕತ್ತನ್ನು ಕೊಯ್ದುಕೊಂಡು ರಸ್ತೆಯಲ್ಲಾ ಓಡಾಡಿದ- ಕಾಪಾಡಲು ಹೆದರಿದ ಜನ

Public TV
1 Min Read

ರಾಯಚೂರು: ಮಾನಸಿಕ ಅಸ್ವಸ್ಥನೊರ್ವ ತನ್ನ ಕತ್ತು ತಾನೇ ಕೊಯ್ದುಕೊಂಡು ರಸ್ತೆಯಲ್ಲಿ ಓಡಾಡಿದ ವಿಚಿತ್ರ ಘಟನೆಯೊಂಡು ನಗರದ ಜಲನಗರದಲ್ಲಿ ನಡೆದಿದೆ.

ಉರುಕುಂದಪ್ಪ ಎಂಬಾತನೇ ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ. ಸಾರ್ವಜನಿಕರ ಎದುರೇ ಈ ಘಟನೆ ನಡೆದರೂ ಯಾರೂ ನಿರೀಕ್ಷಿಸದ ರೀತಿಯಲ್ಲಿ ಕತ್ತು ಕೊಯ್ದುಕೊಂಡು ರಸ್ತೆಯಲ್ಲಿ ಓಡಾಡಿದ್ದಾನೆ. ಕೈಯಲ್ಲಿ ಚಾಕು ಇದ್ದಿದ್ದರಿಂದ ಸ್ಥಳದಲ್ಲಿದ್ದವರು ಸಹ ಕೂಡಲೇ ಸಹಾಯಕ್ಕೆ ಮುಂದಾಗಿಲ್ಲ.

ಉರುಕಂದಪ್ಪ ಅಸ್ವಸ್ಥನಾಗಿ ನೆಲಕ್ಕೆ ಬಿದ್ದಮೇಲೆ 108 ಗೆ ಮಾಹಿತಿ ನೀಡಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಂದು ತಿಂಗಳ ಹಿಂದೆಯೂ ಇಂತಹ ಪ್ರಯತ್ನ ಮಾಡಿದ್ದ ಉರುಕುಂದಪ್ಪ ಎರಡನೇ ಬಾರಿ ಕತ್ತು ಕೊಯ್ದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆ ಹಿನ್ನೆಲೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉರುಕುಂದಪ್ಪ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

https://www.youtube.com/watch?v=9GPirxP79OE

Share This Article
Leave a Comment

Leave a Reply

Your email address will not be published. Required fields are marked *