ನಾಳೆಯಿಂದ ರಾಯಚೂರಿನಲ್ಲಿ 35 ಬಸ್ಸುಗಳ ಓಡಾಟ – ಪ್ರತೀ ಪ್ರಯಾಣಿಕರ ಮಾಹಿತಿ ಸಂಗ್ರಹ

Public TV
1 Min Read

ರಾಯಚೂರು: ಗ್ರೀನ್ ಝೋನ್ ಪ್ರದೇಶಗಳಲ್ಲಿ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡಿರುವ ಹಿನ್ನೆಲೆ ರಾಯಚೂರಿನಲ್ಲಿ ನಾಳೆಯಿಂದ 35 ಬಸ್ಸುಗಳು ಓಡಾಡಲಿವೆ.

ಪ್ರತೀ ತಾಲೂಕು ಪ್ರದೇಶದಿಂದ 5 ಬಸ್ಸುಗಳನ್ನ ಬಿಡಲಾಗುತ್ತಿದ್ದು, ಬಸ್ಸಿನ ಅರ್ಧದಷ್ಟು ಪ್ರಯಾಣಿಕರಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗಿದೆ. ಪ್ರಯಾಣಿಕರ ಸಂಪೂರ್ಣ ಮಾಹಿತಿ ಪಡೆದು ಟಿಕೆಟ್ ನೀಡಲು ಸಾರಿಗೆ ಇಲಾಖೆ ನಿರ್ವಾಹಕರಿಗೆ ಸೂಚಿಸಿದೆ.

ಪ್ರತಿ ಬಸ್ಸಿನಲ್ಲೂ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಿದ್ದು, ಒಂದು ಬಸ್ಸಿನಲ್ಲಿ 30 ಜನರ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ರೈತರು, ಕಾರ್ಮಿಕರು ಸೇರಿದಂತೆ ನಾನಾ ಕೆಲಸಗಳಿಗೆ ಹೋಗುವ ಜನರಿಗೆ ಅನುಕೂಲ ಮಾಡುವ ಹಿನ್ನೆಲೆ ಬಸ್ ಸಂಚಾರ ಆರಂಭವಾಗಿದ್ದು, ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಬಸ್ ನಿಲ್ದಾಣದಲ್ಲೂ ಬಸ್ ಹತ್ತುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಬಸ್ಸುಗಳ ನಡುವೆಯೂ ಸಾಮಾಜಿಕ ಅಂತರದ ವ್ಯವಸ್ಥೆ ಮಾಡಲಾಗಿದೆ. ಆಸನಗಳಿಗನ್ನ ಸೆಲ್ಲೋ ಟೇಪ್ ನಿಂದ ಲಾಕ್ ಮಾಡಿ ಬಸ್ ಗಾಗಿ ಕಾಯುವ ಪ್ರಯಾಣಿಕರಲ್ಲಿ ಅಂತರ ಕಾಪಾಡಲು ಸಿಬ್ಬಂದಿ ಮುಂದಾಗಿದ್ದಾರೆ.

ಬ್ಯಾರಿಕೇಡ್ ಮೂಲಕ ಬಸ್ ನಿಲ್ದಾಣಕ್ಕೆ ಬರುವ, ಹೋಗುವ ಬಸ್ಸುಗಳ ನಿಯಂತ್ರಣ ಮಾಡಲಾಗಿದ್ದು. ಬಸ್ ನಿಲ್ದಾಣದ ಒಳಗೆ ಬರುವ ಪ್ರಯಾಣಿಕರನ್ನ ಪರೀಕ್ಷಿಸಿ, ಸ್ಯಾನಿಟೈಸರ್ ನೀಡಿ ಒಳಬಿಡಲಾಗುತ್ತದೆ. ಸದ್ಯಕ್ಕೆ ಗ್ರಾಮೀಣ ಭಾಗದಲ್ಲಿ ಬಸ್ಸುಗಳು ಓಡಾಡಲ್ಲ, ತಾಲೂಕು ಪ್ರದೇಶಗಳಿಗೆ ಮಾತ್ರ ಬಸ್ಸುಗಳು ಓಡಾಡಲಿವೆ.

Share This Article
Leave a Comment

Leave a Reply

Your email address will not be published. Required fields are marked *