ಅಕ್ರಮ ಮರಳುಗಾರಿಕೆಯಿಂದಾದ ಗುಂಡಿಯಲ್ಲಿ ಬಿದ್ದು ಯುವತಿ ಸಾವು

Public TV
1 Min Read

ರಾಯಚೂರು: ಅಕ್ರಮ ಮರಳುಗಾರಿಕೆಯಿಂದ ಉಂಟಾದ ಗುಂಡಿಯಲ್ಲಿ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ದೇವದುರ್ಗದ ಜೋಳದಹೆಡಗಿ ಬಳಿ ನಡೆದಿದೆ.

ಶ್ರೀದೇವಿ (18) ಮೃತ ದೈರ್ದೈವಿ. ಕೃಷ್ಣ ನದಿ ದಂಡೆಯಲ್ಲಿ ಉಂಟಾಗಿದ್ದ ಗುಂಡಿಯಲ್ಲಿ ಬಿದ್ದು ಯುವತಿ ಸಾವನ್ನಪ್ಪಿದ್ದಾಳೆ. ದನ ಮೇಯಿಸಲು ಹೋಗಿದ್ದಾಗ ನೀರು ಕುಡಿಯಲು ಹೋಗಿದ್ದ ಶ್ರೀದೇವಿ ಗುಂಡಿ ಬಳಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ. ಅಕ್ರಮ ಮರಳುಗಾರಿಕೆ ಪರಿಣಾಮ ನಿರ್ಮಾಣವಾದ ಗುಂಡಿ ಯುವತಿಯನ್ನ ಬಲಿ ತೆಗೆದುಕೊಂಡಿದೆ. ನಿಯಮ ಬಾಹಿರವಾಗಿ ಸುಮಾರು 15 ಅಡಿ ಆಳಕ್ಕೆ ತೋಡಿ ಮರಳು ತೆಗೆದ ಪರಿಣಾಮ ಗುಂಡಿ ಉಂಟಾಗಿತ್ತು.

ಗುಂಡಿಯಲ್ಲಿ ನೀರು ಆಳವಾಗಿ ತುಂಬಿಕೊಂಡಿದ್ದರಿಂದ ಯುವತಿ ಸಾವನ್ನಪ್ಪಿದ್ದಾಳೆ. ಸ್ಥಳೀಯರ ಸಹಾಯದೊಂದಿಗೆ ಪೊಲೀಸರು ಶವವನ್ನ ಹೊರತೆಗೆದಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *