ರಾಹುಲ್ ಗಾಂಧಿ ಬೆಂಬಲ: ದೇಶ ಬಿಟ್ಟು ನರಕಕ್ಕೆ ಹೋಗಿ ಎಂದ ಬಿಗ್ ಬಾಸ್ ವಿನ್ನರ್

Public TV
1 Min Read

ಒಂದು ಪಕ್ಷದ ನಾಯಕರು ಮತ್ತೊಂದು ಪಕ್ಷದ ನಾಯಕರನ್ನು ಟೀಕಿಸುವುದು ಕಾಮನ್. ಆದರೆ, ಫುಲ್ ಟೈಮ್ ರಾಜಕಾರಣಿ ಅಲ್ಲದ ನಟಿಯೊಬ್ಬರು ರಾಹುಲ್ ಗಾಂಧಿ (Rahul Gandhi) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ರಾಹುಲ್ ಬೆಂಬಲಿಸಿದವರಿಗೂ ಚಾಟಿ ಬೀಸಿರುವ ಅವರು ನೀವೆಲ್ಲರೂ ನರಕಕ್ಕೆ ಹೋಗಿ ಅಂದಿದ್ದಾರೆ.

ರಾಹುಲ್ ಬಗ್ಗೆ ಇಂತಹ ಮಾತುಗಳನ್ನು ಆಡಿದ್ದು ಬೇರೆ ಯಾರೂ ಅಲ್ಲ, ಬಿಗ್ ಬಾಸ್ ಮರಾಠಿಯ ವಿನ್ನರ್, ನಟಿ ಮೇಘಾ ಧಾಡೆ (Megha Dhade) ಆಕ್ರೋಶ ಹೊರ ಹಾಕಿದ್ದಾರೆ. ಅವರು ಈ ರೀತಿ ಮಾತನಾಡಿದ್ದಕ್ಕೆ ಕಾರಣವೂ ಇದೆ. ಚುನಾವಣಾ ಪ್ರಚಾರದ ವೇಳೆ ರಾಹುಲ್ ಅವರಿಗೆ ಶಿವಾಜಿ ಮಹರಾಜರ (Shivaji Maharaj) ಪ್ರತಿಮೆಯನ್ನು ನೀಡಲಾಗಿದೆ. ಫೋಟೋಗಾಗಿ ಅದನ್ನು ಸ್ವೀಕರಿಸಿ, ನಂತರ ಅಲ್ಲಿಯೇ ಪ್ರತಿಮೆಯನ್ನು ಬಿಟ್ಟು ಹೋಗಿದ್ದಾರಂತೆ.

 

ಮೇಘಾ ನಟನೆಯ ಜೊತೆಗೆ ರಾಜಕಾರಣದಲ್ಲೂ ಸಕ್ರೀಯರಾಗಿದ್ದಾರೆ. ಹಾಗಾಗಿ ಮೇಘಾ ಮಾತುಗಳು ವೈರಲ್ ಆಗಿವೆ. ಅದರಲ್ಲೂ ಶಿವಾಜಿ ಪ್ರತಿಮೆ ಇಟ್ಟುಕೊಂಡು ರಾಹುಲ್ ಗಾಂಧಿ ಅವರನ್ನು ಅನೇಕರು ಟೀಕಿಸಿದ್ದಾರೆ.

Share This Article