ರಾಹುಲ್ ಗಾಂಧಿಗೆ ಪೊಲಿಟಿಕಲ್ ಮೆಚ್ಯೂರಿಟಿ ಇಲ್ಲ, ಯಾರೋ ಬರೆದುಕೊಟ್ಟಿದ್ದನ್ನ ಓದ್ತಾರೆ: ಹೆಚ್‍ಡಿಕೆ

Public TV
1 Min Read

ಮೈಸೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪೊಲಿಟಿಕಲ್ ಮೆಚ್ಯೂರಿಟಿ ಇಲ್ಲ. ಯಾರೋ ಬರೆದುಕೊಟ್ಟಿದ್ದನ್ನು ಬಂದು ಓದಿ ಹೋಗ್ತಾರೆ ಅಂತಾ ಜೆಡಿಎಸ್ ರಾಜ್ಯಾಧ್ಯಕ್ಷ ಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರು ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಮುಂದಿನ ಸರ್ಕಾರ ಯಾರದು ಬರುತ್ತೆ ಅಂತಾ ನಮಗೂ ಮತ್ತು ನಿಮಗೂ ಗೊತ್ತಿಲ್ಲ. ಚುನಾವಣೆಗಾಗಿ ಸಿಎಂ ಈಗಾಗಲೇ ಬಹಳಷ್ಟು ಟೆಂಡರ್‍ದಾರರಿಂದ ಹಣ ಸಂಗ್ರಹಿಸಿದ್ದಾರೆ. ಒಂದು ವೇಳೆ ಅವರೇ ಅಧಿಕಾರಕ್ಕೆ ಬಂದರೂ ನಿರ್ವಹಣೆ ಮಾಡದಷ್ಟೂ ಆಡಳಿತ ವ್ಯವಸ್ಥೆಯನ್ನು ಕೆಡಿಸಿದ್ದಾರೆ. ಯಾರೇ ಅಧಿಕಾರಕ್ಕೆ ಬಂದರೂ ಆಡಳಿತ ನಡೆಸುವುದಕ್ಕೆ ಆಗದಷ್ಟು ವ್ಯವಸ್ಥೆ ಕೆಟ್ಟಿದೆ ಅಂತಾ ಆರೋಪಿಸಿದ್ರು.

ಸಿದ್ದರಾಮಯ್ಯ ಅವರದು ನುಡಿದಂತೆ ನಡೆದ ಸರ್ಕಾರ ಅಲ್ಲ, ಕಾಂಗ್ರೆಸ್‍ನದ್ದು ನುಡಿದಂತೆ ನಡೆಯದ ಸರ್ಕಾರ. ಆಡಳಿತವಾಧಿಯಲ್ಲಿ ಎಷ್ಟು ಲೂಟಿ ಮಾಡಬೇಕೆಂದು ಪ್ಲಾನ್ ಮಾಡಿದ್ರೂ ಅಷ್ಟು ಹಣವನ್ನು ದೋಚಿದ್ದಾರೆ ಅಂತಾ ಕೈ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.

Share This Article
Leave a Comment

Leave a Reply

Your email address will not be published. Required fields are marked *