ಶಿಷ್ಟಾಚಾರ ಮುರಿದು ಶಾಲೆಗೆ ಭೇಟಿಕೊಟ್ಟ ರಾಹುಲ್ ಗಾಂಧಿ

Public TV
1 Min Read

ಉಡುಪಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜ್ಯದ ಮೂರನೇ ಜನಾಶೀರ್ವಾದ ಯಾತ್ರೆ ಬಿರುಸಿನಿಂದ ನಡೆದಿದೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಎರ್ಮಾಳು ಸರ್ಕಾರಿ ಶಾಲೆಯ ಮೈದಾನದಲ್ಲಿ ಇಳಿದ ರಾಹುಲ್ ಗಾಂಧಿ ಮೊದಲು ರಾಜ್ಯ, ಕೇಂದ್ರ ನಾಯಕರಿಂದ ಗೌರವ ಸ್ವೀಕರಿಸಿದರು.

ಇದಾದ ಬಳಿಕ ಶಾಲೆಯ ಜಗಲಿಗೆ ಬಂದ ರಾಹುಲ್ ಗಾಂಧಿ, ಮಕ್ಕಳ ಜೊತೆ ಬೆರೆತರು. ಶಿಕ್ಷಣ ಮತ್ತು ಊಟದ ಬಗ್ಗೆ ವಿಚಾರಿಸಿದರು. ಶಿಕ್ಷಕಿಯ ಜೊತೆ ಮಾತುಕತೆ ಮಾಡಿದರು. ಹೇಗಿದ್ದೀರಿ? ಚೆನ್ನಾಗಿದ್ದಿರಾ? ಊಟ ಮಾಡಿದ್ರಾ? ಅಂತ ಎಲ್ಲರನ್ನು ವಿಚಾರಿಸುತ್ತಾ ಎಲ್ಲಾ ಮಕ್ಕಳ ಕೈ ಕುಲುಕಿದರು.

ಕೈ ಕುಲುಕುತ್ತಿದ್ದಂತೆ ಸಂಭ್ರಮಿಸಿದ ಮಕ್ಕಳು ರಾಹುಲ್ ಗಾಂಧಿ ಅವರನ್ನು ಅಪ್ಪಿಕೊಂಡರು. ಎರ್ಮಾಳು ತೆಂಕದ ಸರ್ಕಾರಿ ಹೈಸ್ಕೂಲು ಮಕ್ಕಳು ರಾಹುಲ್ ಗಾಂಧಿಯವರನ್ನು ಹತ್ತಿರದಿಂದ ಕಂಡು ಖುಷಿಪಟ್ಟರು. ಅಲ್ಲಿಂದ ಎರ್ಮಾಳ್ ಗೆ ಆಗಮಿಸಿದ ರಾಹುಲ್ ಗಾಂಧಿ, ಮೀನು ಬೆಳೆಗಾರರ ಜೊತೆ ಸಂವಾದ ನಡೆಸಿದರು. ರಾಹುಲ್ ಸುಮಾರು 15 ರಿಂದ 20 ನಿಮಿಷ ಮಾತುಕತೆ ನಡೆಸಿದ ರಾಹುಲ್ ಮೀನು ಬೆಳೆಗಾರರ ಜೊತೆ ಎಳನೀರು ಸೇವಿಸಿದರು.

ರಾಹುಲ್ ಗಾಂಧಿಗೆ ನೀರು ದೋಸೆ, ಮೀನಿನ ಖಾದ್ಯದ ವ್ಯವಸ್ಥೆ ಮಾಡಲಾಗಿತ್ತು. ನಂತರ ರಾಜಕೀಯ ತರಬೇತಿ ಕೇಂದ್ರವನ್ನು ಉದ್ಘಾಟನೆ ಮಾಡಿ ಮಾತನಾಡಿ, ದೇಶದಲ್ಲಿ ಜನ ಯೋಚಿಸುವ ರೀತಿ ಬದಲಾಗಿದೆ. ಜನರ ಅಪೇಕ್ಷೆಗೆ ತಕ್ಕಂತೆ ನಡೆದುಕೊಳ್ಳಬೇಕಾಗಿದೆ. ಸೇವಾದಳ ಸಂಸ್ಥೆ ರಾಜಕೀಯ ತರಬೇತಿ ನೀಡಲಿದ್ದು, ರಾಜ್ಯದ ಮೊದಲ ಟ್ರೈನಿಂಗ್ ಸೆಂಟರ್ ಎಂಬ ಹೆಗ್ಗಳಿಕೆಗೆ ರಾಗ್ನಾ ಪಾತ್ರವಾಗಿದೆ ಅಂದ್ರು. ರೋಡ್ ಶೋ ನಡೆಸಿದ ರಾಹುಲ್ ರಸ್ತೆ ಬದಿ ನಿಂತಿದ್ದ ಜನಕ್ಕೆ ಕೈ ಬೀಸಿದರು.

 

Share This Article
Leave a Comment

Leave a Reply

Your email address will not be published. Required fields are marked *