ದುಬೈನಲ್ಲಿರೋ ಮಂಗ್ಳೂರು ಮೂಲದ ವ್ಯಕ್ತಿ ವಿರುದ್ಧ ರಹೀಂ ಉಚ್ಚಿಲ್ ದೂರು

Public TV
1 Min Read

ಹುಬ್ಬಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಗಲಭೆ ತಣ್ಣಗಾಗುವ ಮೊದಲೇ ಫೇಸ್‍ಬುಕ್ ಪೋಸ್ಟ್ ಒಂದು ವೈರಲ್ ಆಗಿ ವಿವಾದದ ಹೊಗೆ ಎಬ್ಬಿಸಿದೆ.

ಬಿಜೆಪಿಯ ಅಲ್ಪ ಸಂಖ್ಯಾಂತರ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಅವರ ಫೇಸ್‍ಬುಕ್ ಪೋಸ್ಟ್ ಬಳಸಿ ಅವಹೇಳನ ಮಾಡಲಾಗಿದೆ. ದುಬೈನಲ್ಲಿರೋ ಮಂಗಳೂರು ಮೂಲದ ವಿಲಿಯಂ ಪಿಂಟೋ ಈ ಪೋಸ್ಟ್ ಮಾಡಿದ್ದು, ರಹೀಂ ಉಚ್ಚಿಲ್ ಅವರು ಹುಬ್ಬಳ್ಳಿಯ ಪ್ರಸಿದ್ಧ ಸಿದ್ಧಾರೂಢ ಮಠಕ್ಕೆ ಭೇಟಿ ಕೊಟ್ಟ ಫೋಟೋ ಹಾಕಿದ್ದಾನೆ.

 

ಜೊತೆಗೆ ಸಿದ್ಧಾರೂಢ ಮಠಕ್ಕೆ ಹೊಸದಾಗಿ ಪ್ರಧಾನ ಅರ್ಚಕರ ನೇಮಕ ಆಗಿದೆ ಎಂದು ಪೋಸ್ಟ್ ಮಾಡಿದ್ದಾನೆ. ಹೀಗಾಗಿ ವಿಲಿಯಂ ಪಿಂಟೊ ವಿರುದ್ಧ ರಹೀಂ ಉಚ್ಚಿಲ್ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *