ರಾಗಿ ಮುದ್ದೆ, ನಾಟಿಕೋಳಿ ಸಾರು, ಜನಾರ್ದನ ಹೋಟೆಲ್ ದೋಸೆ ನೆನಪಿಸಿಕೊಂಡ ವೆಂಕಯ್ಯನಾಯ್ಡು

Public TV
1 Min Read

ಬೆಂಗಳೂರು: ವೆಂಕಯ್ಯನಾಯ್ಡು ಭಾರತದ ಉಪ ರಾಷ್ಟ್ರಪತಿಗಳು. ಬಿಜೆಪಿಯ ಹಿರಿಯ ಮುಖಂಡರು. ಅನೇಕ ವರ್ಷ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರದ ಮಂತ್ರಿ ಆಗಿದ್ದರು. ಹುಟ್ಟೂರು ಆಂಧ್ರ ಆದರೂ ಕರ್ಮಭೂಮಿ ಮಾತ್ರ ನಾಯ್ಡು ಅವರಿಗೆ ಕರ್ನಾಟಕ. ಕರ್ನಾಟಕಕ್ಕೂ ವೆಂಕಯ್ಯನಾಯ್ಡು ಅವರಿಗೂ ಎಲ್ಲಿಲ್ಲದ ಬಾಂಧವ್ಯ.

ನಾಯ್ಡು ಅವರು ಕರ್ನಾಟಕದ ಬಾಂಧವ್ಯವನ್ನ ಇವತ್ತು ಮೆಲುಕು ಹಾಕಿದರು. ರಾಜಭವನದಲ್ಲಿ ನಡೆದ ನ್ಯಾಕ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಲ್ಲಿನ ರಾಗಿಮುದ್ದೆ, ನಾಟಿ ಕೋಳಿ ಸಾಂಬಾರ್ ರುಚಿಯನ್ನು ನೆನಪಿಸಿಕೊಂಡರು. ಅಲ್ಲದೆ ರಾಜ್ಯಸಭೆ ಸದಸ್ಯರಾಗಿದ್ದಾಗ ಬೆಳಗ್ಗೆ ಟಿಫನ್ ಮಾಡೋಕೆ ಜನಾರ್ದನ ಹೊಟೇಲ್ ಗೆ ಹೋಗ್ತಿದ್ದರಂತೆ. ಅಲ್ಲಿನ ದೋಸೆ ಸವಿಯುತ್ತಿದ್ದೆ ಅಂತ ನೆನಪು ಮಾಡಿಕೊಂಡರು.

ಭಾಷಣದ ವೇಳೆ ಆರೋಗ್ಯ ಪದ್ಧತಿ ನಮಗೆ ಸರಿಯಾಗಿ ಇರಬೇಕು. ಪ್ರೊಟಿನ್ ಅಂಶದ ಆಹಾರಗಳನ್ನ ಸೇವನೆ ಮಾಡಬೇಕು ಅಂತ ಎಲ್ಲರಿಗೂ ಕಿವಿಮಾತು ಹೇಳಿದರು. ಈ ವೇಳೆ ರಾಗಿಮುದ್ದೆ, ನಾಟಿಕೋಳಿ ಸಾರು, ದೋಸೆ ಬಗ್ಗೆ ನೆನಪು ಮಾಡಿಕೊಂಡರು. ಜನಾರ್ದನ ಹೊಟೇಲ್ ತಿಂಡಿಗೆ ಈಗಲೂ ಮಾರು ಹೋಗಿರೋ ವೆಂಕಯ್ಯನಾಯ್ಡು ಇವತ್ತು ರಾಜಭವನಕ್ಕೆ ಜನಾರ್ದನ ಹೋಟೆಲ್ ಅಡುಗೆ ಭಟ್ಟರನ್ನ ಕರೆಸಿಕೊಂಡು ದೋಸೆ ಮಾಡಿಸಿಕೊಂಡು ಸೇವಿಸುತ್ತಿದ್ದರು. ಒಟ್ಟಿನಲ್ಲಿ ಉಪ ರಾಷ್ಟ್ರಪತಿ ಅದರೂ ನಮ್ಮ ಬೆಂಗಳೂರಿನ ರುಚಿ ಮಾತ್ರ ನಾಯ್ಡು ಅವರು ಇನ್ನು ಮರೆತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *