ಎಂಟಿಬಿಯಿಂದ ಕವ್ವಾಲಿ ಆಯೋಜನೆ – ಹಣದ ಮಳೆ ಸುರಿಸಿದ ಮುಸ್ಲಿಂ ಮುಖಂಡರು

Public TV
1 Min Read

ಬೆಂಗಳೂರು: ನಗರದ ಹೊರವಲಯದ ಹೊಸಕೋಟೆ ಮಾಜಿ ಶಾಸಕ ಹಾಗೂ ಹಾಲಿ ಸಚಿವ ಎಂಟಿಬಿ ನಾಗರಾಜ್ (MTB Nagaraj) ಅವರು ಕವ್ವಾಲಿ ಕಾರ್ಯಕ್ರಮವನ್ನು (Qawwali Program) ಆಯೋಜನೆ ಮಾಡಿ ಭಾಗಿಯಾಗಿದ್ದಾರೆ.

ಪ್ರತಿ ವರ್ಷದಂತೆ ಸಚಿವ ಎಂಟಿಬಿ ನಾಗರಾಜ್ ಕವ್ವಾಲಿ ಕಾರ್ಯಕ್ರಮವನ್ನು ಹೊಸಕೋಟೆ ನಗರದ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಾರೆ. ಕಾರ್ಯಕ್ರಮವನ್ನು ತಾವೇ ಏರ್ಪಡಿಸಿದ್ದು, ಅವರ ಜೊತೆ ಮಗ ನಿತೀಶ್ ಪುರುಷೋತ್ತಮ್ ಕೂಡಾ ಭಾಗಿಯಾಗಿದ್ದರು. ಸೋಮವಾರ ಮಧ್ಯರಾತ್ರಿಯವರೆಗೆ ಈ ಕಾರ್ಯಕ್ರಮ ನಡೆದಿದೆ.

ಮುಸಲ್ಮಾನರಿಗಾಗಿ (Muslims) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಗರಾಜ್ ಹಾಗೂ ಅವರ ಪುತ್ರ ನಿತೀಶ್ ಟೊಪಿ ಧರಿಸಿದ್ದರು. ನಾಗರಾಜ್ ಭಾಷಣವನ್ನು ಕೂಡಾ ಉರ್ದು ಭಾಷೆಯಲ್ಲಿಯೇ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಶುರುವಾಯ್ತು ಎಲೆಕ್ಷನ್ ‘ಲಕ್ಷ್ಮಿ’ ಕಟಾಕ್ಷ – ಇದು ಯುಪಿ ಮಾಡೆಲ್?

ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ಈ ಕಾರ್ಯಕ್ರಮವನ್ನು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ನಿತೀಶ್, ನಾವು ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದೇವೆ. ನಾವು ಪಕ್ಷದ ವತಿಯಿಂದ ಕಾರ್ಯಕ್ರಮ ಆಯೋಜಿಸಿಲ್ಲ. ಎಲ್ಲ ಧರ್ಮದವರು ಬಾಂಧವ್ಯದಿಂದ ಇರಬೇಕು ಎನ್ನುವುದು ನಮ್ಮ ಬಯಕೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ‘ಗೃಹಲಕ್ಷ್ಮಿ’ಗೆ ಬೊಮ್ಮಾಯಿ ಬಜೆಟ್ ಕೌಂಟರ್?

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *