ಸರಗಳ ಮಧ್ಯೆ ಹೆಬ್ಬಾವು- ಜ್ಯುವೆಲ್ಲರಿ ಶಾಪ್ ತೆರೆದ ಮಾಲೀಕನಿಗೆ ಶಾಕ್

Public TV
1 Min Read

ತಿರುವನಂತಪುರ: ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಇದೀಗ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಪ್ ಗಳು ಓಪನ್ ಆಗುತ್ತಿವೆ. ಹಾಗೆಯೇ ಜ್ಯುವೆಲ್ಲರಿ ಶಾಪ್ ಮಾಲೀಕ ತನ್ನ ಅಂಗಡಿಯ ಬಾಗಿಲು ತೆರೆದಾಗ ಶಾಕ್ ಒಂದು ಕಾದಿತ್ತು.

ಈ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದ್ದು, ಮಾಲೀಕ ತನ್ನ ಅಂಗಡಿಯನ್ನು ಕ್ಲೀನ್ ಮಾಡಲೆಂದು ಬಾಗಿಲು ತೆರೆದಾಗ ಈ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.

ಲಾಕ್ ಡೌನ್ ಮುಗಿಸಿ ತಿಂಗಳ ಬಳಿಕ ಶಾಪ್ ಬಾಗಿಲು ಓಪನ್ ಮಾಡುತ್ತಿದ್ದಂತೆಯೇ ಸರಗಳ ಮಧ್ಯೆ ಹೆಬ್ಬಾವು ಕಾಣಿಸಿಕೊಂಡಿದೆ. ಅಲ್ಲದೆ ಶಾಪ್ ಒಳಗಡೆ ಹೆಬ್ಬಾವು ಬರೋಬ್ಬರಿ 22 ಮೊಟ್ಟೆಗಳನ್ನು ಕೂಡ ಇಟ್ಟಿರುವುದನ್ನು ಕಂಡು ಮಾಲೀಕ ಅಚ್ಚರಿಗೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಂಗಡಿ ಮಾಲೀಕ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಧಿಕಾರಿಗಳು ಕೂಡ ಸ್ಥಳಕ್ಕೆ ದೌಡಾಯಿಸಿ ಹೆಬ್ಬಾವು ಹಾಗೂ ಮೊಟ್ಟೆಗಳನ್ನು ರಕ್ಷಣೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *