‘ಊ ಅಂಟಾವಾ’ ವಿವಾದದ ಕುರಿತು ಮೌನ ಮುರಿದ ದೇವಿ ಶ್ರೀ ಪ್ರಸಾದ್

Public TV
2 Min Read

ಚೆನ್ನೈ: ‘ಪುಷ್ಪಾ’ ಸಿನಿಮಾದ ‘ಊ ಅಂಟಾವಾ’ ಸಾಂಗ್ ವಿವಾದದ ಕುರಿತು ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್ ಮೌನ ಮುರಿಸಿದ್ದಾರೆ.

‘ಊ ಅಂಟಾವಾ’ ಸಾಂಗ್ ಅನ್ನು ಐಟಂ ಸಾಂಗ್ ಎಂದು ಹೇಳಿದಕ್ಕೆ ರಾಜಕೀಯ ಮುಖಂಡರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ದೇವಿ ಶ್ರೀ ಪ್ರಸಾದ್, ಸಂಗೀತಗಾರನಿಂದ ಮತ್ತು ಸಂಯೋಜನೆಯ ಕಡೆಯಿಂದ, ನಿರ್ದೇಶಕರು ಏನು ಬಯಸುತ್ತಾರೆ, ಸಿನಿಮಾದ ವಿಷಯವು ಏನನ್ನು ಬಯಸುತ್ತೆ ಅದನ್ನು ನಾವು ಮೊದಲು ತಿಳಿದುಕೊಳ್ಳುತ್ತೇವೆ. ನಂತರ ಅವರಿಗೆ ಬೇಕಾಗಿರುವ ರೀತಿ ನಾವು ಪೂರೈಸಬೇಕು. ಪ್ರೇಕ್ಷಕರು ಒಂದು ಸಾಂಗ್ ಅನ್ನು ಯಾವುದೇ ರೀತಿ ನೋಡಿದರೂ ಅದು ಸರಿಯೇ. ಲವ್ ಸಾಂಗ್ ಆಗಿದ್ದರೆ ಲವ್ ಸಾಂಗ್, ಐಟಂ ಸಾಂಗ್ ಆಗಿದ್ದರೆ ಐಟಂ ಸಾಂಗ್ ಆಗುತ್ತೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ವಸತಿ ಶಾಲೆಯ 16 ಮಕ್ಕಳಿಗೆ ವಕ್ಕರಿಸಿದ ಕೊರೊನಾ

ನನಗೆ, ಅದು ಭಕ್ತಿ, ಪ್ರೀತಿ ಅಥವಾ ಐಟಂ ಹಾಡು ಆಗಿರಲಿ. ಸಂಯೋಜನೆಯ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ಇದನ್ನು ಈ (ರಾಜಕೀಯ) ವ್ಯಕ್ತಿಗಳು ಬೇರೆ ಸನ್ನಿವೇಶದಲ್ಲಿ ತೆಗೆದುಕೊಂಡಿದ್ದಾರೆ ಅದು ಅನಗತ್ಯವಾಗಿತ್ತು ಎಂದು ತಿಳಿಸಿದರು

ದೇವಿ ಶ್ರೀ ಪ್ರಸಾದ್ ಸಂಯೋಜಿಸಿದ ಈ ಹಾಡಿಗೆ ಸಮಂತಾ ರುತ್ ಪ್ರಭು ಸಖತ್ ಆಗಿ ಸ್ಟೆಪ್ ಹಾಕಿದ್ದು, ಅಲ್ಲು ಅರ್ಜುನ್ ಜೊತೆ ಮಿಂಚಿದ್ದಾರೆ. ಈ ಸಾಂಗ್ ಈಗ ಟ್ರೆಂಡ್ ಕ್ರಿಯೇಟ್ ಮಾಡಿದ್ದು, ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೂ ಈ ಸಾಂಗ್ ಅನ್ನೆ ಗುನುಗುತ್ತ ಇರುತ್ತಾರೆ. ಇನ್‍ಸ್ಟಾ, ಸೋಶಿಯಲ್ ಮೀಡಿಯಾದಲ್ಲಿ ಈ ಸಾಂಗ್ ಫುಲ್ ಕ್ರೇಜ್ ಮೂಡಿಸಿದೆ.

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪಾ’ ಸಿನಿಮಾದ ಹಾಡುಗಳು ಜನರನ್ನು ರಂಜಿಸುತ್ತಿದೆ. ಪ್ರಸ್ತುತ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲಿಯೂ ಈ ಸಿನಿಮಾದ ಹಾಡಿಗೆ ಜನರಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಿವಾದಕ್ಕೂ ಸಹ ಕಾರಣವಾಗಿದೆ. ರಶ್ಮಿಕಾ ಅವರ ‘ಸಾಮಿ ಸಾಮಿ’ ಸಾಂಗ್ ರೊಮ್ಯಾಂಟಿಕ್ ಆಗಿದ್ದರೆ, ‘ಊ ಅಂಟಾವಾ’ ಸಾಂಗ್ ಐಟಂ ಸಾಂಗ್ ಆಗಿದ್ದು, ಎಲ್ಲ ಕಡೆ ಸಖತ್ ವೈರಲ್ ಆಗಿದೆ. ಇದನ್ನೂ ಓದಿ:  ಬ್ರೇಕಪ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್!

ಪ್ರಸ್ತುತ ದೇವಿ ಶ್ರೀ ಪ್ರಸಾದ್ ‘ಪುಷ್ಪಾ 2’ ಸಿನಿಮಾದ ಸಂಗೀತ ಸಂಯೋಜನೆಯಲ್ಲಿ ನಿರತರಾಗಿದ್ದಾರೆ. ರಣವೀರ್ ಸಿಂಗ್ ನಟನೆಯ ‘ಸರ್ಕಸ್’ ಅನ್ನು ಪೈಪ್‍ಲೈನ್‍ನಲ್ಲಿ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *