ಪುರಂದರಗಡ ಅಲ್ಲ, ತೀರ್ಥಹಳ್ಳಿ ತಾಲೂಕಿನ ಆರಗ ಪುರಂದರ ದಾಸರ ಜನ್ಮಸ್ಥಳ!

Public TV
1 Min Read

ಶಿವಮೊಗ್ಗ: ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಎಂದೇ ಖ್ಯಾತಿಗಳಿಸಿರುವ ಪುರಂದರದಾಸರ ಮೂಲ ಸ್ಥಳ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಪ್ರದೇಶ ಎಂದು ಸಂಶೋಧಕರು ಗುರುತಿಸಿದ್ದಾರೆ.

ಇದೂವರೆಗೂ ಮಹಾರಾಷ್ಟ್ರದ ಪುರಂದರಘಡ ಇವರ ಮೂಲಸ್ಥಾನ ಎಂದು ಗುರುತಿಸಿಲಾಗಿತ್ತು. ಆದರೆ, ಪುರಂದರಗಡದಲ್ಲಿ ಪುರಂದರ ಎಂಬ ಹೆಸರನ್ನು ಬಿಟ್ಟರೆ ಬೇರೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಇತಿಹಾಸಕಾರರು ಪತ್ತೆ ಹಚ್ಚಿದ್ದಾರೆ. 2016ರಲ್ಲಿ ಪುರಂದರದಾಸರ ಹುಟ್ಟೂರಿನ ಬಗ್ಗೆ ಸಂಶೋಧನೆ ನಡೆಸಿ, ವರದಿ ಸಲ್ಲಿಸಲು ಸರ್ಕಾರ ಪದ್ಮಭೂಷಣ ಆರ್.ಕೆ.ಪದ್ಮನಾಭ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು.

ಈ ಸಮಿತಿ ತನ್ನ ವರದಿಯನ್ನು ಸಲ್ಲಿಸಿದ್ದು, ಪುರಂದರದಾಸರ ಮೂಲಸ್ಥಳ ಆರಗ ಎಂದು ದೃಢಪಡಿಸಿದೆ. 1484ರಲ್ಲಿ ಜನಿಸಿದ್ದ ಪುರಂದರದಾಸರು 1564ರಲ್ಲಿ ಕಾಲವಾದರು. ಐದು ಲಕ್ಷ ಕೀರ್ತನೆ ಬರೆಯುವ ಗುರಿ ಇಟ್ಟುಕೊಂಡಿದ್ದ ಪುರಂದರದಾಸರು 4 ಲಕ್ಷದ 75 ಸಾವಿರ ಕೀರ್ತನೆಗಳನ್ನು ಬರೆದಿದ್ದಾರೆ. ಇವರ ಮೂಲಕವೇ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ್ದರು,

ಸಂಗೀತ ಪಿತಾಮಹಾರ ಮೂಲಕ ಕರ್ನಾಟಕ ಅದರಲ್ಲೂ ಮಲೆನಾಡಿನ ತೀರ್ಥಹಳ್ಳಿ ಎಂಬ ವಿಷಯ ಸಂಗೀತಾಸಕ್ತರು ಹಾಗೂ ಇತಿಹಾಸ ಪ್ರೇಮಿಗಳಲ್ಲಿ ರೋಮಾಂಚನ ಮೂಡಿಸಿದೆ. ರಾಜ್ಯ ಸರ್ಕಾರ ಪ್ರದೇಶವನ್ನು ವಿಶೇಷ ಸ್ಮಾರಕವನ್ನಾಗಿ ಘೋಷಣೆ ಮಾಡಬೇಕೆಂಬ ಬೇಡಿಕೆ ಈಗ ಸಂಗೀತಾ ಪ್ರೇಮಿಗಳಿಂದ ವ್ಯಕ್ತವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ https://www.instagram.com/publictvnews/

Share This Article
Leave a Comment

Leave a Reply

Your email address will not be published. Required fields are marked *