ಉಪ್ಪಿನಲ್ಲಿ ಚಿತ್ರ ಬಿಡಿಸಿ ಅಪ್ಪುಗೆ ವಿಶೇಷ ವಿದಾಯ ಹೇಳಿದ ತೆಲುಗು ಅಭಿಮಾನಿ

Public TV
1 Min Read

ಕೋಲಾರ: ಕನ್ನಡ ಚಿತ್ರರಂಗವಲ್ಲದೆ ದೇಶ-ವಿದೇಶಗಳಲ್ಲೂ ಪುನೀತ್ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಅವರ ಅಕಾಲಿಕ ಸಾವನ್ನು ನೆನೆದು ಮರಗುತ್ತಿದ್ದಾರೆ. ಈ ಮಧ್ಯೆ ಆಂಧ್ರಪ್ರದೇಶದ ಪುನೀತ್ ರಾಜ್ ಕುಮಾರ್ ಅಭಿಮಾನಿ ಉಪ್ಪಿನಲ್ಲಿ ಅವರ ಚಿತ್ರ ಬಿಡಿಸಿ ತನ್ನ ಅಭಿಮಾನವನ್ನ ಮೆರದಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನ ಕಲಾವಿದನೊಬ್ಬ ಅಪ್ಪುವಿನ ಚಿತ್ರವನ್ನ ಉಪ್ಪಿನಲ್ಲಿ ಬಿಡಿಸುವ ಮೂಲಕ ಸಂತಾಪ ಸೂಚಿಸಿದ್ದಾರೆ. ಪೂರಿ ಆರ್ಟ್ಸ್ ನ ಪುರುಷೋತ್ತಮ್ ಕನ್ನಡ ಧ್ವಜದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರ ಬಿಡಿಸಿ, ವಿ ಮಿಸ್ ಯೂ ಅಪ್ಪು ಎಂದು ಬರೆದಿದ್ದಾರೆ. ಇದನ್ನೂ ಓದಿ: ಉದ್ಯಮಿಗೆ ಹಣಕ್ಕೆ ಜೈಲಿನಿಂದಲೇ ಬೇಡಿಕೆಯಿಟ್ಟ ಕೈದಿ

ಪುನೀತ್ ರಾಜ್‍ಕುಮಾರ್ ಅವರಿಗೆ ಕನ್ನಡಿಗರು ಮಾತ್ರವಲ್ಲ, ತೆಲುಗು, ತಮಿಳಿನಲ್ಲೂ ತನ್ನ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಅನ್ನೋದಕ್ಕೆ ಇದೆಲ್ಲಾ ಸಾಕ್ಷಿಯಾಗಿದೆ ಎಂದರೆ ತಪ್ಪಲ್ಲ.

Share This Article
Leave a Comment

Leave a Reply

Your email address will not be published. Required fields are marked *