ಕೆಜಿಎಫ್ ದೊಡ್ಡ ಕಾಣಿಕೆ ಎಂದ್ರು ಪುನೀತ್- ನಟಸಾರ್ವಭೌಮ ಚಿಂದಿ ಅಂದ ಯಶ್

Public TV
1 Min Read

ಬೆಂಗಳೂರು: ವಿಶ್ವಾದ್ಯಂತ ತೆರೆಕಂಡು ಸಾಕಷ್ಟು ಸದ್ದು ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ದೊಡ್ಡ ಕಾಣಿಕೆ ಎಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ. ಈ ವೇಳೆ ಯಶ್ ನಟಸಾರ್ವಭೌಮ ಚಿತ್ರ ಚಿಂದಿ ಎಂದು ಪ್ರತಿಕ್ರಿಯಿಸಿದ್ದಾರೆ.

“ಕನ್ನಡ ಚಿತ್ರರಂಗಕ್ಕೆ ಕೆಜಿಎಫ್ ಮೂಲಕ ದೊಡ್ಡ ಕಾಣಿಕೆಯನ್ನು ಕೊಟ್ಟ ಹೊಂಬಾಳೆ ಫಿಲ್ಮ್ ಹಾಗೂ ಕೆಜಿಎಫ್ ತಂಡಕ್ಕೆ ನನ್ನ ಶುಭಾಶಯಗಳು. ಯಶ್, ಪ್ರಶಾಂತ್ ನೀಲ್ ನಿಮಗೆ ಶುಭಾಶಯಗಳು ಹಾಗೂ ಕನ್ನಡ ಚಿತ್ರರಂಗದ ಸಾಮಥ್ರ್ಯ ಮತ್ತು ಅದರ ವ್ಯಾಪ್ತಿಯನ್ನು ತೋರಿಸಿದ ವಿಜಯ್ ಸರ್ ನಿಮ್ಮ ಮೇಲೆ ನನಗೆ ಹೆಮ್ಮೆಯಿದೆ” ಎಂದು ಪುನೀತ್ ರಾಜ್‍ಕುಮಾರ್ ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.

ಈ ಟ್ವೀಟ್‍ಗೆ ಯಶ್ ಪ್ರತಿಕ್ರಿಯಿಸಿ, “ಧನ್ಯವಾದಗಳು ಸರ್. ಈ ಮಾತುಗಳು ನನಗೆ ತುಂಬಾ ಮುಖ್ಯವಾಗುತ್ತದೆ. ನಿಮ್ಮ ನಟಸಾರ್ವಭೌಮ ಚಿತ್ರದ ಟೀಸರ್ ನೋಡಿದೆ. ಚಿಂದಿ ಉಡಾಯಿಸುವ ಆಗಿದೆ. ಈ ಚಿತ್ರಕ್ಕಾಗಿ ನಾನು ಕಾಯುತ್ತಿದ್ದೇನೆ” ಎಂದು ಯಶ್ ರೀ-ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ.

ಕೆಜಿಎಫ್ ಸಿನಿಮಾ ಬಿಡುಗಡೆ ದಿನ ಪುನೀತ್ ರಾಜ್‍ಕುಮಾರ್ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಲೈವ್ ವಿಡಿಯೋ ಮಾಡಿ “ಕೆಜಿಎಫ್ ಚಿತ್ರತಂಡಕ್ಕೆ ಶುಭಾಶಯ. ಅಲ್ಲದೇ ನನ್ನ ಗೆಳೆಯ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ವಿಜಯ್ ಸರ್ ಗೂ ಶುಭಾಶಯ ಕೆಜಿಎಫ್ ಗೆ ಒಳ್ಳೆದಾಗಲಿ” ಎಂದು ಚಿತ್ರಕ್ಕೆ ಶುಭಹಾರೈಸಿದ್ದರು.

ಕೆಜಿಎಫ್ ಸಿನಿಮಾ ಒಟ್ಟು 5 ಭಾಷೆಯಲ್ಲಿ ಶುಕ್ರವಾರ ಬರೋಬ್ಬರಿ 2000ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ ಸುಮಾರು 30 ಕೋಟಿ ಹಣವನ್ನು ಬಾಕ್ಸ್ ಆಫೀಸ್‍ನಲ್ಲಿ ತುಂಬಿಸಿಕೊಂಡಿದ್ದು, ಕೇವಲ ಮೂರು ದಿನದಲ್ಲಿ 60 ಕೋಟಿ ಗೂ ಹೆಚ್ಚು ಕಲೆಕ್ಷನ್ ಆಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *