ಅಪ್ಪು ಸಮಾಧಿಗೆ ಧಾರವಾಡದಿಂದ ನಡೆದೇ ಬಂದ ಅಭಿಮಾನಿ

By
1 Min Read

ಬೆಂಗಳೂರು: ಅಪ್ಪು ನಮ್ಮನ್ನಗಲಿ ಒಂದೂವರೆ ತಿಂಗಳು ಕಳೆದಿದೆ. ಪುನೀತ್ ಮೇಲಿನ ಅಭಿಮಾನವನ್ನು ಫ್ಯಾನ್ಸ್ ತೋರ್ಪಡಿಸ್ತಲೇ ಇದ್ದಾರೆ. ಧಾರವಾಡದ ಅಪ್ಪು ಅಭಿಮಾನಿ ದಾಕ್ಷಾಯಿಣಿ ಎಂಬುವವರು ಬೆಂಗಳೂರಿಗೆ ಕಾಲ್ನಡಿಗೆಯಲ್ಲೇ ಆಗಮಿಸಿದ್ದಾರೆ.

ಧಾರವಾಡದಿಂದ ಕಾಲ್ನಡಿಗೆಯಲ್ಲಿ ಬಂದ ದಾಕ್ಷಾಯಿಣಿಯವರನ್ನು ದೊಡ್ಮನೆ ಸದಸ್ಯರು ಸ್ವಾಗತ ಮಾಡಿದರು. ಬಳಿಕ ದಾಕ್ಷಾಯಿಣಿ ಅಪ್ಪು ಸಮಾಧಿ ದರ್ಶನ ಪಡೆದರು. 550 ಕಿಮಿ ದೂರದಿಂದ ಆಗಮಿಸಿರುವ ಅಪ್ಪು ಸಮಾಧಿ ದರ್ಶನ ಪಡೆದ್ರು. ಇದನ್ನೂ ಓದಿ: ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ

ದಾಕ್ಷಾಯಿಣಿಯವರಿಗೆ 3 ಮಕ್ಕಳಿದ್ದು, ಕಳೆದ 14 ದಿನಗಳ ಹಿಂದೆ ಓಟ ಆರಂಭ ಮಾಡಿದ್ದರು. ಧಾರವಾಡದ ಅಭಿಮಾನಿ ಜೊತೆ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಕೆಲ ಸಮಯ ಕಳೆದರು. ಇದನ್ನೂ ಓದಿ: ಅಪ್ಪು ಸಮಾಧಿ ನೋಡಲು ಓಡುತ್ತಾ ಹೊರಟ ಮೂರು ಮಕ್ಕಳ ತಾಯಿ

Share This Article
Leave a Comment

Leave a Reply

Your email address will not be published. Required fields are marked *