10 ಬಾರಿ ಈ ನಟನ ಸಿನಿಮಾ ನೋಡಿದ್ರು ಅಪ್ಪು- ಮನಗೆದ್ದ ಆ ಕಲಾವಿದನಿಗೆ ಹೊಸ ಚಾನ್ಸ್

Public TV
1 Min Read

ಬೆಂಗಳೂರು: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ದೊಡ್ಮನೆಯ ರಾಜಕುಮಾರ ಅಪ್ಪು ಯಾರ ಅಭಿಮಾನಿ ಎಂಬ ಸಿಕ್ರೇಟ್ ರಿವೀಲ್ ಆಗಿದೆ. ಆ ಸಿನಿಮಾವನ್ನು 10 ಬಾರಿ ನೋಡಲು ಆ ನಟನ ನಟನೆಯೇ ಕಾರಣವಾಗಿದೆ. ತಮ್ಮ ಅತ್ಯುತ್ತಮ ಅಭಿನಯದಿಂದ ಪುನೀತ್‍ರಾಜ್‍ಕುಮಾರ್ ಮನಗೆದ್ದಿರುವ ನಟನಿಗೆ ಮತ್ತೊಂದು ಚಾನ್ಸ್ ನೀಡಿದ್ದಾರೆ.

ಒಂದು ಮೊಟ್ಟೆಯ ಕಥೆ ಸಿನಿಮಾದ ನಾಯಕ ನಟ ರಾಜ್ ಬಿ.ಶೆಟ್ಟಿ ಪುನೀತ್‍ರಾಜ್‍ಕುಮಾರ್ ಮನಗೆದ್ದ ನಟನಾಗಿದ್ದು, ಈಗ ಅವರಿಗೆ ‘ಮಾಯಾ ಬಜಾರ್ 2016’ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‍ಕುಮಾರ್ ನಿರ್ಮಾಣದ 2ನೇ ಸಿನಿಮಾ ಮಾಯಾಜಾರ್ 2016 ಮುಹೂರ್ತದ ಸಮಾರಂಭ ನಡೆಯಿತು. ಈ ಚಿತ್ರದಲ್ಲಿ ಪ್ರಕಾಶ್ ರಾಜ್, ವಸಿಷ್ಠಸಿಂಹ, ರಾಜ್ ಬಿ. ಶೆಟ್ಟಿ, ಸುಧಾರಾಣಿ, ಅಚ್ಚುತ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ.

ಮುಹೂರ್ತಕ್ಕೆ ಎಂಟ್ರಿಕೊಟ್ಟ ಶಿವರಾಜ್ ಕುಮಾರ್ ಕ್ಲಾಪ್ ಮಾಡೋ ಮೂಲಕ ಚಿತ್ರತಂಡಕ್ಕೆ ವಿಶ್ ಮಾಡಿದ್ರು. ಮಾಧ್ಯಮಗಳ ಮುಂದೆ ಮಾತಿಗೆ ಕುಳಿತ ಅಪ್ಪು ಅವರು ನಾನು ರಾಜ್ ಬಿ. ಶೆಟ್ಟಿ ಅವರ ದೊಡ್ಡ ಅಭಿಮಾನಿ ಒಂದು ಮೊಟ್ಟೆಯ ಕಥೆ ಸಿನಿಮಾನ 10 ಸಾರಿ ನೋಡಿದ್ದಿನಿ ಅಂತ ಹೇಳಿದ್ರು.

ಮಾಯಾ ಬಜಾರ್ ರಾಧಾಕೃಷ್ಣ ಆ್ಯಕ್ಷನ್ ಕಟ್ ಹೇಳ್ತಿರೋ ಮೊದಲ ಸಿನಿಮಾ ಇದಾಗಿದ್ದು, ಅಭಿಶೇಕ್ ಕಾಸರಗೋಡು ಕ್ಯಾಮರಾ ಹಿಡಿದ್ರೆ ಮಿಧುನ್ ಮುಕುಂದ ಟ್ಯೂನ್ಸ್ ಕಂಪೋಸ್ ಮಾಡ್ತಿದ್ದಾರೆ. ಇದೇ ವರ್ಷ ಮಾಯಾ ಬಜಾರ್ ರಿಲೀಸ್ ಕೂಡ ಆಗುತ್ತೆ ಎಂಬ ಸುಳಿವನ್ನು ಚಿತ್ರತಂಡ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *