ಯೋಧ ಗುರು ಕುಟುಂಬಕ್ಕೆ ನೆರವಾಗಲು ನವಜೋಡಿಗಳಿಂದ ವಿಶೇಷ ಕಾರ್ಯ

Public TV
1 Min Read

ಹುಬ್ಬಳ್ಳಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವು ನೀಡಲು ಹಲವರು ಮುಂದೆ ಬಂದಿದ್ದು, ಹುಬ್ಬಳ್ಳಿಯ ನವಜೋಡಿಯೊಂದು ತಮ್ಮ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಿ ಬಂದ ಆತಿಥಿಗಳಿಂದ ದೇಣಿಗೆ ಸಂಗ್ರಹ ಮಾಡಿದೆ.

ಹುಬ್ಬಳ್ಳಿಯ ಕೃಷ್ಣ ಇರಕಲ್ ಹಾಗು ಕೀರ್ತಿ ಇರಕಲ್ ಜೋಡಿ ನಿಶ್ಚಿತಾರ್ಥ ಸಮಾರಂಭದಲ್ಲಿ ನೃತ್ಯ ಮಾಡಿ ದೇಣಿಗೆ ಸಂಗ್ರಹ ಮಾಡಿದ್ದು, ಹುತಾತ್ಮ ಯೋಧರಿಗೆ ತಮ್ಮ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅರ್ಪಣೆ ಮಾಡಿದ್ದಾರೆ.

ಯುವ ಜೋಡಿಯ ಕಾರ್ಯಕ್ಕೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ಕೈಲಾದ ಸಹಾಯ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ದೇಶ ಭಕ್ತಿಗೀತೆಗೆ ನವ ಜೋಡಿ ಸೇರಿದಂತೆ ಯುವಕರ ಗುಂಪು ಡಾನ್ಸ್ ಮಾಡಿದೆ. ಸೋಮವಾರ ನಿಶ್ವಿತಾರ್ಥ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ನೇರವಾಗಿ ಹುತಾತ್ಮ ಯೋಧ ಗುರು ಅವರ ಕುಟುಂಬದ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ನವಜೋಡಿ ತಿಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *