ರಾಜಕೀಯ ವೈಷಮ್ಯದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಪುರ್ತಗೇರಿ ಗ್ರಾಮಸ್ಥರು!

Public TV
1 Min Read

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ. ಇದರಿಂದಾಗಿ ಗ್ರಾಮಸ್ಥರು ಯಾವ ಸರ್ಕಾರ ಬಂದರೂ ನಮಗೆ ಮಾತ್ರ ಯಾವುದೆ ಸೌಲಭ್ಯ ಮಾತ್ರ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮವು, ಶಾಸಕ ಜಿ.ಎಸ್. ಪಾಟೀಲ್, ಮಾಜಿ ಸಚಿವ ಕಳಕಪ್ಪ ಬಂಡಿ, ಶ್ರೀಶೈಲಪ್ಪ ಬಿದರೂರ್ ಹಾಗೂ ಜ್ಞಾನದೇವ ದೊಡ್ಡಮೇಟಿ ಅಲ್ಲದೇ ಅನೇಕ ಘಟಾನುಘಟಿ ನಾಯಕರುಗಳು ಆಡಳಿತ ಮಾಡಿದ ಕ್ಷೇತ್ರ. ಗ್ರಾಮದಲ್ಲಿನ ದುಸ್ಥಿತಿ ನೋಡಿದರೇ, ಈ ನಾಯಕರುಗಳು ಇಷ್ಟು ವರ್ಷಗಳ ಕಾಲ ಯಾವ ರೀತಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದು ಉದಾಹರಣೆಯಾಗಿದೆ.

ರಾಂಪೂರ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ 400 ರಿಂದ 450 ಮನೆಗಳಿವೆ. ಸುಮಾರು 1,100 ಮಂದಿ ಕನಿಷ್ಠ ಸೌಲಭ್ಯಗಳಿಂದಲೂ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಹಾಗೂ ಸಾರ್ವಜನಿಕರು ಓಡಾಡಲು 3 ಕಿಲೋ ಮೀಟರ್ ದೂರವಿರುವ ಗಜೇಂದ್ರಗಡ ಪಟ್ಟಣಕ್ಕೆ ನಡೆದುಕೊಂಡೇ ಹೋಗಬೇಕು. ಇಲ್ಲವೇ ಸೈಕಲ್, ಬೈಕ್ ಅಥವಾ ಟಂ ಟಂ ವಾಹನಗಳಿಗೆ ಅವಲಂಬಿತರಾಗಬೇಕು. ಗಜೇಂದ್ರಗಡದಲ್ಲಿ ಬಸ್ ಡಿಪೋ ಇದ್ರೂ 3 ಕಿ.ಮೀ ದೂರವಿರುವ ಪುರ್ತಗೇರಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ.

ರಾಜಕೀಯ ವೈಷ್ಯಮ್ಯದಿಂದ ಊರು ಅಭಿವೃದ್ಧಿಯಾಗದೇ ಜನ ಪರಿತಪಿಸುತ್ತಿದ್ದಾರೆ. ಬೇರೆ ಅಭಿವೃದ್ಧಿ ಬೇಡ ನಮ್ಮ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಬಸ್ ಸೌಲಭ್ಯ ಕಲ್ಪಿಸಿ ಕೊಡಿ ಎಂದು ದೂರದ ಗದಗದಿಂದ ನಮ್ಮ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

https://www.youtube.com/watch?v=oU1jbaXy9Ms

Share This Article
Leave a Comment

Leave a Reply

Your email address will not be published. Required fields are marked *