EXCLUSIVE: ಪೊಲೀಸರ ಮುಂದೆ ಡಾ. ಸೌಂದರ್ಯ ಪತಿ ಡಾ. ನೀರಜ್ ಹೇಳಿದ್ದೇನು..?

Public TV
2 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು, ಇದೀ ಪತಿ ಡಾ. ನೀರಜ್ ಅವರಿಂದ ಪೊಲೀಸರು ಹೇಳಿಕೆಯನ್ನು ಪಡೆದಿದ್ದಾರೆ.

ಸೌಂದರ್ಯ ನಿನ್ನೆ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಪತಿ ನೀರಜ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನೀರಜ್ ಅವರು ಪೊಲೀಸರ ಮುಂದೆ ನೀಡಿರುವ ಹೇಳಿಕೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಕೋವಿಡ್ ಸಮಯದಲ್ಲಿ PPE ಕಿಟ್ ಧರಿಸಿ ಕೆಲಸ ಮಾಡಿದ್ದ ಸೌಂದರ್ಯ..!

ಸೌಂದರ್ಯ ಪತಿ ಹೇಳಿದ್ದೇನು..?
ನನ್ನ, ನನ್ನ ಹೆಂಡತಿ ಸೌಂದರ್ಯ ನಡುವೆ ಯಾವುದೇ ಗಲಾಟೆ ಇರಲಿಲ್ಲ. ನಾವಿಬ್ಬರೂ ತುಂಬಾ ಅನ್ಯೋನ್ಯವಾಗಿದ್ದೆವು. ಸೌಂದರ್ಯಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ. ಸಾಕಷ್ಟು ವರ್ಷಗಳಿಂದ ಸೌಂದರ್ಯ ಕುಟುಂಬ ಹಾಗೂ ನಮ್ಮ ಕುಟುಂಬ ಪರಿಚಯ ಇತ್ತು. ನನ್ನ ದೊಡ್ಡಪ್ಪನ ಮೂಲಕ ಸೌಂದರ್ಯ ಕುಟುಂಬ ಆತ್ಮೀಯವಾಗಿತ್ತು. ಮದುವೆಗೂ ಮುನ್ನವೇ ನನಗೆ ಸೌಂದರ್ಯ ಪರಿಚಯ ಇತ್ತು. ಇಬ್ಬರು ಕೂಡ ಒಳ್ಳೆಯ ಸ್ನೇಹಿತರಾಗಿದ್ದೆವು. ಇದನ್ನೂ ಓದಿ: ಟೀ ಕುಡಿಯಲು ಬರ್ತಿದ್ದರು, ಬಿಎಸ್‍ವೈ ಮೊಮ್ಮಗಳು ಅಂತ ಗೊತ್ತಿರ್ಲಿಲ್ಲ- ಸೌಂದರ್ಯ ಸಾವಿಗೆ ಸ್ಟಾಲ್ ಯುವಕ ಬೇಸರ

ಮನೆಯವರ ಒಪ್ಪಿಗೆ ಮೇರೆಗೆ 2018ರಲ್ಲಿ ಮದುವೆ ಆಗಿತ್ತು. ಹೆಚ್ಚಿನ ಸಂದರ್ಭದಲ್ಲಿ ಸೌಂದರ್ಯ ತಾಯಿಯ ಮನೆಯಲ್ಲಿ ಇರುತ್ತಿದ್ದಳು. ಬಳಿಕ ಆಕೆ ಬೌರಿಂಗ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದಳು. ನಾನು ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ ಇದ್ದೆ. ಇಬ್ಬರಿಗೂ ಹತ್ತಿರವಾಗಲಿ ಅಂತ ಮೌಂಟ್ ಕಾರ್ಮೆಲ್ ಬಳಿ ಮನೆ ಮಾಡಿಕೊಂಡೆವು. ಸೌಂದರ್ಯ ಆಸೆಯಂತೆ ಕಳೆದ ತಿಂಗಳು ಕಿಯಾ ಕಾರನ್ನೂ ಪ್ರೆಸೆಂಟ್ ಮಾಡಿದ್ದೆ. ಕಳೆದ ತಿಂಗಳು ನಾನು ದುಬೈಗೆ ಹೋದಾಗಲೂ ಸಂತೋಷವಾಗಿದ್ದಳು. ಮನೆಯಲ್ಲಿ ಜಗಳ ಯಾವುದೂ ನಡೆದಿರಲಿಲ್ಲ. ಆದರೆ ನಾನು ಆಸ್ಪತ್ರೆಗೆ ಹೋದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: 15 ದಿನದ ಹಿಂದೆಯಷ್ಟೇ ಪತಿ ಜೊತೆಗೆ ಕಾಲೇಜಿಗೆ ತೆರಳಿ ಹಳೆ ಸ್ನೇಹಿತರನ್ನು ಮಾತಾಡಿಸಿದ್ದ ಸೌಂದರ್ಯ!

ನನಗೆ ವಿಚಾರ ಗೊತ್ತಾದ ಬಳಿಕ ಮನೆಗೆ ಹೋದೆ. ಬಾಗಿಲು ತೆರೆಯದೇ ಇದ್ದಾಗ ಬಾಲ್ಕನಿ ಮೂಲಕ ಒಳಗೆ ಹೋಗಿ ಬಾಗಿಲು ತೆರೆದೆವು. ಈ ವೇಳೆ ಸೌಂದರ್ಯ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಳು. ಕೆಳಗೆ ಇಳಿಸಿದಾಗ ಬ್ರೀಥಿಂಗ್ ಇತ್ತು. ನಾನು ಬದುಕಿಸೋ ಪ್ರಯತ್ನ ಮಾಡಿದೆ. ಕೊನೆಗೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷೆ ಮಾಡಿದರು. ಐಸಿಯೂ ಅಲ್ಲಿ ಪ್ರಯತ್ನ ಮಾಡಿದ್ರು. ಆದರೆ ಅಷ್ಟರಲ್ಲಿ ಸೌಂದರ್ಯ ಪ್ರಾಣ ಹೋಗಿದೆ ಅನ್ನೋದು ತಿಳಿಸಿದ್ರು ಅಂತ ಪೊಲೀಸರ ಮುಂದೆ ನೀರಜ್ ಉಲ್ಲೇಖಿಸಿದ್ದಾರೆ.

ಬೆಂಗಳೂರಿನ ವಸಂತನಗರದಲ್ಲಿರುವ ಅಪಾರ್ಟ್‍ಮೆಂಟ್‍ನ ಫ್ಲಾಟ್‍ನಲ್ಲಿ ಬಿಎಸ್‍ವೈ ಅವರ ಮೊಮ್ಮಗಳು ಸೌಂದರ್ಯ (30) ಆತ್ಮಹತ್ಯೆ ಮಾಡಿಕೊಂಡಿದ್ದರು. ವೃತ್ತಿಯಲ್ಲಿ ವೈದ್ಯರಾಗಿದ್ದ, ಸೌಂದರ್ಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತಿ ಡಾಕ್ಟರ್ ನೀರಜ್ ಆಸ್ಪತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸೌಂದರ್ಯ ನೇಣು ಬಿಗಿದುಕೊಂಡಿದ್ದರು. 9 ತಿಂಗಳ ಗಂಡು ಮಗುವನ್ನು ಬೇರೊಂದು ಕೊಠಡಿಯಲ್ಲಿ ಮಲಗಿಸಿ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂಜೆ ಅಬ್ಬಿಗೆರೆ ಫಾರ್ಮ್ ಹೌಸ್‍ನಲ್ಲಿ ಲಿಂಗಾಯತ ಸಂಪ್ರದಾಯದಂತೆ ಸೌಂದರ್ಯ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *