ನಿಸರ್ಗ ರಕ್ಷಣೆಗೆ ಪಣತೊಟ್ಟ ನರಗುಂದ ಯುವಕರು

Public TV
1 Min Read

ಗದಗ: ವಾರಾಂತ್ಯ ಬಂದರೆ ಯುವಕರು ಮೋಜು ಮಸ್ತಿ ಮಾಡುತ್ತಾರೆ ಎನ್ನುವ ಮಾತು ಪ್ರಚಲಿತದಲ್ಲಿದೆ. ಆದರೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ಯುವಕರು. ಇವರಿಗೆ ವೀಕೆಂಡ್ ಅಂದ್ರೆ ಮೋಜು ಮಸ್ತಿಯಲ್ಲ. ಅದು ಇವರ ಪಾಲಿಗೆ ಪರಿಸರ ಜಾಗೃತಿಯ ದಿನ. ಪ್ರತಿ ಭಾನುವಾರ ಪರಿಸರ ಸಂರಕ್ಷಣೆಗೆ ಮೀಸಲಿಟ್ಟಿ ಕೆಲಸ ಮಾಡುತ್ತಿದ್ದಾರೆ.

`ನಿಸರ್ಗ ಸೇವಕರು’ ಎನ್ನುವ ಹೆಸರನ್ನು ತಮ್ಮ ತಂಡಕ್ಕೆ ಕಟ್ಟಿಕೊಂಡಿರುವ ಈ ಯುವಕರು ವಾರಾಂತ್ಯದ ದಿನಗಳಲ್ಲಿ ಪಿಕಾಸಿ, ಗುದ್ದಲಿ ಹಿಡಿದು ಸಸಿಗಳನ್ನ ನೆಡುತ್ತ ಜನರಲ್ಲಿ ಈ ಪರಿಸರ ಜಾಗ್ರತಿ ಮೂಡಿಸುತ್ತಿದ್ದಾರೆ.

ಮೂಲತಃ ನೌಕರರು, ವ್ಯಾಪಾರಸ್ಥರು, ರೈತಾಪಿ ಜನ ಆಗಿರುವ ಈ ಗುಂಪಿನ ಸದಸ್ಯರು ಕಳೆದ ಒಂದು ವರ್ಷದಿಂದ ನರಗುಂದ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳ ಪ್ರಮುಖ ಬೀದಿ, ಸರ್ಕಾರಿ, ಅರೆಸರ್ಕಾರಿ ಕಚೇರಿಗಳು, ದೇವಸ್ಥಾನ, ಮಠ ಮಸೀದಿ, ಮಂದಿರಗಳ ಬಯಲು ಜಾದಲ್ಲಿ ನೂರಾರು ಸಸಿಗಳನ್ನ ನೆಟ್ಟು, ಪೋಷಿಸುತ್ತಿದ್ದಾರೆ.

ಪ್ರತಿ ಭಾನುವಾರ ಬೆಳಗ್ಗೆ 7.30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಶ್ರಮದಾನ ಮಾಡುತ್ತಿದ್ದಾರೆ. ನಿಸರ್ಗ ಉಳಿವಿಗೆ ಕನಸು ಕಟ್ಟಿಕೊಂಡ ಯುವಕರ ಈ ಸೇವೆಯನ್ನ ನರಗುಂದದ ಸಾರ್ವಜನಿಕರು ಹಾಗೂ ಗಣ್ಯ ವ್ಯಕ್ತಿಗಳು ಮುಕ್ತ ಕಂಠದಿಂದ ಹೊಗಳುತ್ತಿದೆ.

https://www.youtube.com/watch?v=5rfRymnLGFo

Share This Article
Leave a Comment

Leave a Reply

Your email address will not be published. Required fields are marked *