40 ಹಸು, ಬೆಕ್ಕು, 25 ನಾಯಿಗಳಿಗೆ ಆಶ್ರಯ ನೀಡ್ತಿದ್ದಾರೆ ಹೊನ್ನಾವರದ ಲಲಿತಾ

Public TV
1 Min Read

ಕಾರವಾರ: ಹೆತ್ತವರನ್ನೇ ಅನಾಥ ಮಾಡೋವರ ಮಧ್ಯೆ ಬೀಡಾಡಿ ಮೂಕ ಪ್ರಾಣಿಗಳಿಗೆ ಆಸರೆಯಾಗಿ ಆರೈಕೆ ಮಾಡುವ ಮೂಲಕ ಲಲಿತಾ ಹುಳಸವಾರ್ ಅವರು ಪಬ್ಲಿಕ್ ಹೀರೋ ಆಗಿದ್ದಾರೆ.

ಹೌದು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೇ ಅಂಗಡಿಯ ನಿವಾಸಿ ಲಲಿತಾ ಅವರು ದನ, ಬೆಕ್ಕು, ನಾಯಿ ಮುಂತಾದ ಮೂಕ ಪ್ರಾಣಿಗಳಿಗೆ ಆರೈಕೆ ಮಾಡುತ್ತಿದ್ದಾರೆ. ಹೊನ್ನಾವರದ ಸುತ್ತಮುತ್ತಲಲ್ಲಿ ಅಪಘಾತವಾದ ಹಾಗೂ ಯಾರೂ ಸಾಕದೆ ಬೀದಿಯಲ್ಲಿ ಬಿಟ್ಟಿರುವ 40 ಹಸು, 5 ಎಮ್ಮೆ, 40 ಬೆಕ್ಕು, 24 ನಾಯಿಗಳಿಗೆ ಮನೆಯಲ್ಲೇ ಆಶ್ರಯ ನೀಡಿ ಪೋಷಣೆ ಮಾಡುತ್ತಿದ್ದಾರೆ.

ಅಡಿಕೆ, ಗೋಡಂಬಿ ವ್ಯಾಪಾರ ಮಾಡುತ್ತಿದ್ದು, ಪ್ರತಿದಿನದ ಸಂಪಾದನೆಯನ್ನೇ ಮೂಕ ಪ್ರಾಣಿಗಳಿಗಾಗಿ ಮೀಸಲಿಟ್ಟಿದ್ದೇನೆ. ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಲಕ್ಷಾಂತರ ರೂಪಾಯಿ ಸಾಲ ಮಾಡಿ ಹೊಸ ಮನೆ ಕಟ್ಟಿಸುತ್ತಿರುವುದಾಗಿ ಲಲಿತಾ ಹೇಳಿದ್ದಾರೆ.

ಅರೇ ಅಂಗಡಿ ಗ್ರಾಮದಲ್ಲಿದ್ದಾಗ ಪ್ರಾಣಿಗಳ ಓಡಾಟಕ್ಕೆ ಗ್ರಾಮಸ್ಥರು ತಕರಾರು ಮಾಡಿದ್ದರು. ಜೊತೆಗೆ ಕೆಲ ಹಸುಗಳನ್ನು ಕಸಾಯಿಖಾನೆಗೆ ಒಯ್ಯಲು ಕಟುಕರು ರಾತ್ರೋ ರಾತ್ರಿ ಮಗೆ ನುಗ್ಗಿದ್ದ ಪ್ರಸಂಗವೂ ನಡೆದಿದೆ. ಹಾಗಾಗಿ ಸಾಲಮಾಡಿ ಗ್ರಾಮದ ಹೊರ ಭಾಗದಲ್ಲಿ ಮನೆ ನಿರ್ಮಿಸುತ್ತಿದ್ದಾರೆ ಎಂದು ಸ್ಥಳೀಯರಾದ ಶೋಭಾ ಭಟ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಗಾಯಗೊಂಡಿದ್ದೂ ಸೇರಿದಂತೆ ಎಲ್ಲಾ ಪ್ರಾಣಿಗಳಿಗೆ ಪಶು ವೈದ್ಯಾಧಿಕಾರಿ ವಿನಾಯಕ್ ಉಚಿತವಾಗಿ ಔಷಧಿ, ಚಿಕಿತ್ಸೆ ನೀಡುತ್ತಿದ್ದಾರೆ. ಲಲಿತಾ ಅವರ ಕಾರ್ಯಕ್ಕೆ ಮಗ ಲೋಹಿತ್ ಕೂಡ ಸಾಥ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *