ಶಾಂತಿಸಾಗರದಲ್ಲೀಗ ಒತ್ತುವರಿಕೋರರ ಅಲೆ-ಸಾವಿರಾರು ಎಕರೆ ಒತ್ತುವರಿ ವಿರುದ್ಧ ಹೋರಾಟ..!

Public TV
1 Min Read

-ಸ್ವಾಮೀಜಿಗಳ ಜೊತೆ ಕೈ ಜೋಡಿಸಿದ ಟೆಕ್ಕಿಗಳು..!

ದಾವಣಗೆರೆ: ಜಿಲ್ಲೆಯ ಶಾಂತಿಸಾಗರ ಅಥವಾ ಸೂಳೆಕೆರೆ ಏಷ್ಯಾದಲ್ಲೇ ಎರಡನೇ ದೊಡ್ಡ ಕೆರೆ. ಇಂತಹ ಕೆರೆಯ ಸಾವಿರಾರು ಎಕರೆ ಒತ್ತುವರಿಯಾಗಿದೆ. ಇದರ ವಿರುದ್ಧ ಸೆಟೆದು ನಿಂತು ಹೋರಾಟ ಮಾಡುತ್ತಿರುವ ಟೆಕ್ಕಿಗಳು ಇವತ್ತಿನ ನಮ್ಮ ಪಬ್ಲಿಕ್ ಹೀರೋ.

ದಾವಣಗೆರೆಯ ಚನ್ನಗಿರಿಯ ಶಾಂತಿಸಾಗರ ಇದು ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ. ವಿಸ್ತೀರ್ಣದಲ್ಲಿ 6,550 ಎಕರೆ ಇರೋ ಕೆರೆಯಲ್ಲೀಗ ಸಾವಿರಾರು ಎಕರೆ ಒತ್ತುವರಿಯಾಗಿದೆ. ಕೆರೆಯ ಮಹತ್ವ ಅರಿತ ಸ್ಥಳೀಯರಾಗಿರೋ ಟೆಕ್ಕಿಗಳು, ಕೆಲ ಸ್ವಾಮೀಜಿಗಳು ಜೊತೆ ಸೇರಿ ಕೆರೆ ಉಳಿಸುವ ಅಭಿಯಾನಕ್ಕೆ ಮುಂದಾಗಿದ್ದಾರೆ. 2008ರಲ್ಲಿ ಖಡ್ಗ ಸಂಘಟನೆ ಹಾಗೂ ಕೆರೆ ಸಂರಕ್ಷಣಾ ಸಮಿತಿ ಎಂದು ಸಂಘಟನೆ ಕಟ್ಟಿದ್ದಾರೆ. ಆರಂಭದಲ್ಲಿ ಬೆರಳೆಣಿಕೆಯಷ್ಟಿದ್ದ ಸದಸ್ಯರ ಸಂಖ್ಯೆ ಇದೀಗ 3 ಸಾವಿರ ಮೀರಿದೆ. ಬೆಂಗಳೂರು ಸೇರಿದಂತೆ ದೇಶ- ವಿದೇಶಗಳಲ್ಲಿ ಸಂಘಟನೆ ಸದಸ್ಯರಿದ್ದಾರೆ.

ಕೆರೆಯ ನಕಾಶೆಯಲ್ಲಿರುವ ಜಾಗವನ್ನು ಸರ್ವೆ ಮಾಡಿಸಿ ತಾವೇ ಹಣ ಹಾಕಿಕೊಂಡು ಕೆರೆಯ ಸುತ್ತ ಟ್ರಂಚ್ ಹೊಡೆಸ್ತಿದ್ದಾರೆ. ಜಿಲ್ಲಾಡಳಿತ ಸೂಜಿಮೊನೆಯಷ್ಟೂ ಆಸಕ್ತಿ ತೋರಿಲ್ಲ ಅಂತ ಸಂಘಟನಾ ಸದಸ್ಯರು ದೂರಿದ್ದಾರೆ. ಈ ಯುವಕರ ಉತ್ಸಾಹಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಸಾಥ್ ನೀಡದೇ ಇರುವುದೇ ದುರದೃಷ್ಟಕರವಾಗಿದೆ.

https://www.youtube.com/watch?v=nmtaXhttVJQ

Share This Article
Leave a Comment

Leave a Reply

Your email address will not be published. Required fields are marked *