ಕಷ್ಟದಲ್ಲಿ ಕೈಹಿಡಿದ ನಂಬಿದ ದೇವ-ಭಕ್ತರಿಗೆ ಉಚಿತ ಆರೋಗ್ಯ ಸೇವೆ

Public TV
1 Min Read

-ಡಾ. ಬಸವರಾಜ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ

ಬೀದರ್: ಭಾಲ್ಕಿಯ ಖಾನಾಪೂರದ ಮೈಲಾರ ಮಲ್ಲಣ ದೇವಸ್ಥಾನದ ಭಕ್ತರಿಗೆ 15 ವರ್ಷಗಳಿಂದ ಉಚಿತ ಚಿಕಿತ್ಸೆ ನೀಡುತ್ತಿರುವ ಡಾ.ಬಸವರಾಜ್ ಉಜ್ವಲ್ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ.

ಬೀದರ್ ನ ನೌಬಾದ್ ನಿವಾಸಿಯಾಗಿರುವ ಡಾ. ಬಸವರಾಜ್ ಉಜ್ವಲ್ ಬಿಎಎಂಎಸ್ ವೈದ್ಯರಾಗಿದ್ದು ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಭಾಲ್ಕಿ ತಾಲೂಕಿನ ಖಾನಪೂರ್ ಬಳಿಯ ಮೈಲಾರ್ ಮಲ್ಲಣ್ಣ ದೇವಸ್ಥಾನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಉಚಿತವಾಗಿ ವೈದ್ಯಕೀಯ ನೆರವು ನೀಡುತ್ತಿದ್ದಾರೆ.

ಪ್ರತಿ ಭಾನುವಾರ, ಅಮವಾಸ್ಯೆ, ಹುಣ್ಣಿಮೆ, ಜಾತ್ರ ಉತ್ಸವ ಸೇರಿದಂತೆ ದೇವಸ್ಥಾನದ ಯಾವುದೇ ಕಾರ್ಯಕ್ರಮವಿದ್ದರೂ ವೈದ್ಯರು ಕ್ಯಾಂಪ್ ಹಾಕುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ಆರೋಗ್ಯ ತಪಾಸಣೆ ಮಾಡ್ತಾರೆ. ನೆಗಡಿ, ಕೆಮ್ಮು, ಜ್ವರದಂತ ಪ್ರಾಥಮಿಕ ರೋಗಗಳಿಗೆ ಚಿಕಿತ್ಸೆ ನೀಡ್ತಾರೆ. ದೊಡ್ಡ ಸಮಸ್ಯೆ ಇದ್ದಲ್ಲಿ ತಜ್ಞ ವೈದ್ಯರಿಗೆ ಶಿಫಾರಸು ಮಾಡುತ್ತಾರೆ.

ಡಾಕ್ಟರ್ ಬಸವರಾಜ್ ಅವರ ಪತ್ನಿ ಅವರು ಆರೋಗ್ಯ ಇಲಾಖೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಮೈಲಾರ ಮಲ್ಲಣ್ಣನ ಕೃಪೆಯಿಂದ ನನಗೆ ಸಾಕಷ್ಟು ಒಳ್ಳೆಯದಾಗಿದೆ. ಹಾಗಾಗಿ ಭಕ್ತರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ಡಾ.ಬಸವರಾಜ್ ಹೇಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *