ಮಂಚಕ್ಕೆ ನೇಣು ಬಿಗಿದು ನಿಶ್ಚಿತಾರ್ಥವಾಗಿದ್ದ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

Public TV
1 Min Read

ಯಾದಗಿರಿ: ಕೊಠಡಿಯಲ್ಲಿ ಮಂಚಕ್ಕೆ ನೇಣು ಬಿಗಿದುಕೊಂಡು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗುರುಮಿಠ್ಕಲ್‍ನ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ.

ಲಲಿತಮ್ಮ(18) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಗುರುಮಿಠಕಲ್ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಇದ್ದಳು. ಆದರೆ ತನ್ನ ಗ್ರಾಮದಿಂದ ಬಂದು ಇದ್ದಕ್ಕಿದ್ದಂತೆ ಬುಧವಾರ ನೇಣಿಗೆ ಶರಣಾಗಿದ್ದಾಳೆ.

ಮೃತ ಲಲಿತಮ್ಮಗೆ ತಿಂಗಳ ಹಿಂದೆ ಚಂದಾಪೂರ ಗ್ರಾಮದ ಮಾಣಿಕಪ್ಪ ಜೊತೆ ನಿಶ್ಚಿತಾರ್ಥ ಜರುಗಿತ್ತು. ಆದರೆ ಈ ಮದುವೆ ಲಲಿತಮ್ಮಳಿಗೆ ಇಷ್ಟವಿರಲಿಲ್ಲ. ಈ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಎಂದು ಹೇಳಲಾಗುತ್ತಿದೆ.

ಬುಧವಾರ ಮಧ್ಯಾಹ್ನ ತನ್ನ ಸ್ವ-ಗ್ರಾಮ ಕಾಕಲವಾರದಿಂದ ಗುರುಮಿಠಕಲ್ ನ ವಸತಿ ನಿಲಯಕ್ಕೆ ಬಂದು ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡ ಲಲಿತಮ್ಮ, ನೇಣು ಹಾಕಿಕೊಂಡಿದ್ದಾಳೆ. ತಮ್ಮ ತರಗತಿಗಳಿಂದ ಹಿಂದಿರುಗಿದ ಲಲಿತಮ್ಮನ ಸಹಪಾಠಿಗಳು ಎಷ್ಟೇ ಕರೆದರೂ ಬಾಗಿಲು ತೆಗೆಯಲಿಲ್ಲ. ಕೊನೆಗೆ ಅನುಮಾನಗೊಂಡು ವಸತಿ ನಿಲಯದ ಸಿಬ್ಬಂದಿ ಬಾಗಿಲು ಮುರಿದು ಒಳಗೆ ನುಗ್ಗಿದಾಗ ಲಲಿತಮ್ಮ ನೇಣು ಹಾಕಿಕೊಂಡ ವಿಷಯ ತಿಳಿದಿದೆ.

ಸದ್ಯ ಈ ಪ್ರಕರಣ ಗುರುಮಿಠಕಲ್ ಪೊಲೀಸ್ ಠಾಣೆ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *