ಪಿಎಸ್‍ಐ ಹಗರಣ: ಸಿಐಡಿ ವಶಕ್ಕೆ ಕಾಂಗ್ರೆಸ್ ಮುಖಂಡ

Public TV
1 Min Read

ಮಂಡ್ಯ: ಪಿಎಸ್‍ಐ ಪರೀಕ್ಷೆಗೆ ಹಗರಣ ವಿಚಾರವಾಗಿ ಸಿಐಡಿ ನಿರತರ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡನನ್ನು ಮಂಡ್ಯದಲ್ಲಿ ಸಿಐಡಿ ವಶಕ್ಕೆ ಪಡೆದುಕೊಂಡಿದೆ.

ಮಂಡ್ಯದ ನಾಗಮಂಗಲ ಯೂತ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶರತ್ ರಾಮಣ್ಣ ವಶ. ಶ್ರವಣಬೆಳಗೊಳ ಪಿಎಸ್‍ಐ ಪರವಾಗಿ ಅಕ್ರಮವೆಸಗಿರುವ ಆರೋಪ ಶರತ್ ರಾಮಣ್ಣ ಅವರ ಮೇಲೆ ಇದೆ. ಅಲ್ಲದೇ ಇವರು ಪಿಎಸ್‍ಐ ಕೆಲಸದ ವಿಚಾರದಲ್ಲಿ ಮಧ್ಯವರ್ತಿಯಾಗಿದ್ದರು ಎಂಬ ಆರೋಪ ಸಹ ಇದೆ. ಈ ಆರೋಪಗಳ ಮೇಲೆ ಶರತ್ ರಾಮಯ್ಯ ಅವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸ್ತುತ ವಿಚಾರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ:  ಪೊಲೀಸರನ್ನ ಯಾಮಾರಿಸಿ ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿ 

ಮಾಜಿ ಸಚಿವ ಚೆಲುವರಾಯಸ್ವಾಮಿ ಆಪ್ತ ವಲಯದಲ್ಲಿ ಶರತ್ ಗುರುತಿಸಿಕೊಂಡಿದ್ದರು. ಇವರು ಹಲವು ಕಾಂಗ್ರೆಸ್ ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದು, ಇದರಿಂದ ಕಾಂಗ್ರೆಸ್ ನಾಯಕರು ಮತ್ತಷ್ಟು ಮುಚುಗರಕ್ಕೆ ಒಳಗಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *