ಪ್ರತಿ ಹಗರಣಗಳ ಬುಡ ಅಗೆದಾಗ, ಅದರ ಬೇರುಗಳು ಕೆಪಿಸಿಸಿ ಕಚೇರಿಯನ್ನು ತಲುಪುತ್ತಿದೆ: ಬಿಜೆಪಿ

Public TV
1 Min Read

ಬೆಂಗಳೂರು: ಪ್ರತಿ ಹಗರಣಗಳ ಬುಡ ಅಗೆದಾಗ, ಅದರ ಬೇರುಗಳು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯನ್ನು ತಲುಪುತ್ತಿದೆ ಎಂದು ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ ಕುರಿತಾಗಿ ಬಿಜೆಪಿ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.

DK SHIVAKUMAR

ಟ್ವೀಟ್‍ನಲ್ಲಿ ಏನಿದೆ?
ಪಿಎಸ್‍ಐ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಅತ್ಯಾಪ್ತರ ಬಂಧನವಾಗಿದೆ. ಕಲಬುರ್ಗಿಯ ಕಾಂಗ್ರೆಸ್ ಮುಖಂಡನಿಗೆ ಸೇರಿದ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಪತ್ರಿಕೆ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ದಂಧೆಯ ಹಣ ಸದಾಶಿವ ನಗರದ ಭವ್ಯ ಬಂಗಲೆಗೆ ರವಾನೆಯಾಗುತ್ತಿತ್ತೇ? ಭ್ರಷ್ಟಾಧ್ಯಕ್ಷರೇ ಏನು ಹೇಳುವಿರಿ ಇದಕ್ಕೆ?. ಇದನ್ನೂ ಓದಿ: ಪಕ್ಷದ ಎಲ್ಲಾ ಸ್ಥಾನಗಳಿಂದ ಸುನೀಲ್ ಜಾಖರ್, ಥಾಮಸ್‍ರನ್ನು ತೆಗೆದು ಹಾಕಿದ ಕಾಂಗ್ರೆಸ್

ಪಿಡಬ್ಲ್ಯೂಡಿ ಪತ್ರಿಕೆ ಲೀಕ್ ಹಿಂದೆಯೂ ಕಾಂಗ್ರೆಸ್ ಹಸ್ತವಿದೆ. ಭ್ರಷ್ಟನೊಬ್ಬ ಪಕ್ಷದ ಸಾರಥಿಯಾದರೆ ಇನ್ನೇನು ನಿರೀಕ್ಷಿಸಲು ಸಾಧ್ಯ?. ಮಾಧ್ಯಮದವರ ಮುಂದೆ ಪ್ರಕರಣದ ತನಿಖಾಧಿಕಾರಿಯಂತೆ ವರ್ತಿಸುವ ಕಾಂಗ್ರೆಸ್ ನಾಯಕರು, ತನಿಖೆಗೆ ಸಹಕರಿಸುವಂತೆ ಪೊಲೀಸ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದಾಗ ಕಳ್ಳರಂತೆ ಹಿಂದೆ ಸರಿದ್ದೇಕೆ? ಕಾಂಗ್ರೆಸ್ ನಾಯಕರ ಕಳ್ಳ-ಪೊಲೀಸ್ ಆಟದ ಹಿಂದೆ ಡಿ.ಕೆ ಶಿವಕುಮಾರ್ ಪಾತ್ರವಿರುವುದು ನಿಜವಲ್ಲವೇ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಇಂಧನಗಳ ಮೇಲಿನ ತೆರಿಗೆ ಕಡಿತಗೊಳಿಸಿ: ರಾಜ್ಯಗಳಿಗೆ ಮೋದಿ ಮನವಿ

Share This Article
Leave a Comment

Leave a Reply

Your email address will not be published. Required fields are marked *