ಕೂರ್ಮಾ ರಾವ್ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ- ಸಿಇಓ ಪರ ವಿವಿಧ ಸಂಘಟನೆಗಳ ಹೋರಾಟ

Public TV
1 Min Read

ರಾಯಚೂರು: ಜಿಲ್ಲಾ ಪಂಚಾಯ್ತಿ ಸಿಇಓ ಕೂರ್ಮರಾವ್ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಅಂತ ವಿವಿಧ ಸಂಘಟನೆಗಳು ರಾಯಚೂರಿನಲ್ಲಿ ಪ್ರತಿಭಟನೆ ಮಾಡಿವೆ.

ರಾಯಚೂರು ತಾಲೂಕಿನ ಆತ್ಕೂರಿನಲ್ಲಿ ಕುಡಿಯುವ ನೀರಿನ ಕಾಮಗಾರಿ ವೀಕ್ಷಣೆ ವೇಳೆ ಕೊಳಚೆ ನೀರು ದಾಟಲು ಬಿಡದೇ ಗ್ರಾಮಸ್ಥರೇ ಸ್ವತಃ ಸಿಇಓ ಕೂರ್ಮಾ ರಾವ್ ಅವರನ್ನ ಎತ್ತಿಕೊಂಡು ಹೋಗಿದ್ದಾರೆ. ಇದರಲ್ಲಿ ಕೂರ್ಮರಾವ್ ಅವರ ತಪ್ಪಿಲ್ಲ. ಹೀಗಾಗಿ ದಕ್ಷ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬಾರದು. ಮಾಧ್ಯಮಗಳ ವರದಿ ಹಾಗೂ ಸದನದಲ್ಲಿ ನಡೆದ ಚರ್ಚೆಯನ್ನ ನಾವು ಖಂಡಿಸುತ್ತೇವೆ ಅಂತ ರಾಯಚೂರು ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಆತ್ಕೂರು ಗ್ರಾಮಸ್ಥರಾದ ನರಸಪ್ಪ ಹಾಗೂ ದೇವಪ್ಪ ನಾಯಕ್ ನಾವೇ ಕಾಮಗಾರಿ ತೋರಿಸಲು ಎತ್ತಿಕೊಂಡು ಹೋಗಿದ್ದೇವೆ. ಸಿಇಓ ಎತ್ತಿಕೊಂಡು ಹೋಗಲು ಕೇಳಿಲ್ಲ ಎಂದಿದ್ದಾರೆ. ಆತ್ಕೂರು ಗ್ರಾಮಸ್ಥರು, ರಾಜ್ಯ ಸರ್ಕಾರಿ ನೌಕರರ ಸಂಘ, ಪೌರಸೇವಾ ನೌಕರರ ಸಂಘ, ರಾಜ್ಯ ಎಂಜಿನಿಯರಿಂಗ್ ಸೇವಾ ಸಂಘ ಸೇರಿದಂತೆ ವಿವಿಧ ಸಂಘಗಳ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *