ಕ್ಯಾಮೆರಾ ಕಂಡ ಕೂಡಲೇ ನಿಶ್ಚಿತಾರ್ಥದ ಉಂಗುರ ಮರೆಮಾಚಿದ ಪ್ರಿಯಾಂಕ!

Public TV
2 Min Read

ಮುಂಬೈ: ಮಾಧ್ಯಮಗಳನ್ನು ಕಂಡ ಕೂಡಲೇ ನಟಿ, ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಬೆರಳಲ್ಲಿರುವ ಉಂಗುರವನ್ನು ಮರೆ ಮಾಡಿ ಜೇಬಿನಲ್ಲಿ ಇರಿಸಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೆಹಲಿಗೆ ಬಂದಿಳಿದ ಪ್ರಿಯಾಂಕ ವಿಮಾನ ನಿಲ್ದಾಣದ ಹೊರಗಡೆ ಮಾಧ್ಯಮಗಳನ್ನು ಕಂಡ ಕೂಡಲೇ ಬೆರಳಲ್ಲಿರುವ ಉಂಗುರವನ್ನು ಮರೆ ಮಾಡಿ ಜೇಬಿನಲ್ಲಿ ಇರಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಅಭಿಮಾನಿಯೊಬ್ಬರ ಮೊಬೈಲ್ ನಲ್ಲಿ ಎಲ್ಲ ದೃಶ್ಯಗಳು ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ ಹಿಂದೆ ಸಂದರ್ಶನ ಒಂದರಲ್ಲಿ ನನ್ನ ಬೆರಳಲ್ಲಿ ಎಲ್ಲಿಯವರೆಗೂ ಉಂಗುರ ಇರೋದಿಲ್ಲವೋ ಅಂದಿನವರೆಗೆ ನಾನು ಸಿಂಗಲ್ ಎಂದರ್ಥ ಎಂದಿದ್ದ ಪ್ರಿಯಾಂಕ ಈಗ ಉಂಗರವನ್ನು ಮೆರೆ ಮಾಚಿದ್ದು ಯಾಕೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಅಮೆರಿಕಾದ ಗಾಯಕ ನಿಕ್ ಜೋನ್ಸ್ ಜೊತೆ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕ ಎಲ್ಲಿಯೂ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿಲ್ಲ. ಆದರೆ ತಮ್ಮ ಇಬ್ಬರು ಒಬ್ಬರನ್ನೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎಂಬುವುದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಇದೇ ವರ್ಷ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಪ್ರಿಯಾಂಕ ಮತ್ತು ನಿಕ್ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು.

ಸೆಪ್ಟೆಂಬರ್ 16ರಂದು ನಿಕ್ ಹುಟ್ಟು ಹಬ್ಬದ ದಿನದಂದೇ ಇಬ್ಬರು ತಾರೆಯರು ವೈವಾಹಿಕ ಬಂಧನಕ್ಕೆ ಒಳಗಾಗಲಿದ್ದಾರೆ ಎಂಬ ಮತ್ತೊಂದು ಸುದ್ದಿ ಸದ್ಯ ಚಾಲ್ತಿಯಲ್ಲಿದೆ. ತನಗಿಂತ 10 ವರ್ಷ ಚಿಕ್ಕವನಾದ ನಿಕ್‍ರನ್ನು ಪ್ರಿಯಾಂಕ ಮದುವೆ ಆಗತ್ತಾರೆ ಎಂಬ ಪ್ರಶ್ನೆಯೊಂದು ಅಭಿಮಾನಿಗಳಲ್ಲಿ ಮೂಡಿದೆ. ಇತ್ತ ಮದುವೆ ಕೆಲಸಗಳಲ್ಲಿ ಬ್ಯೂಸಿಯಾದ ಕಾರಣವೇ ಸಲ್ಮಾನ್ ನಟಿಸುತ್ತಿರುವ ‘ಭಾರತ್’ ಸಿನಿಮಾದಿಂದ ಪ್ರಿಯಾಂಕ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಪ್ರಿಯಾಂಕ ಆಗಲಿ ಚಿತ್ರತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಒಂದು ವರ್ಷದ ಹಿಂದೆಯೇ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗ್ಯಾಂಗ್ ಸ್ಟರ್ ಕಥೆಯುಳ್ಳ ‘ಗಂಗೂಬಾಯಿ ಕೋಟೆವಾಲಿ’ ಚಿತ್ರವನ್ನು ಸಹ ಪ್ರಿಯಾಂಕ ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ. ಚಿತ್ರದ ಶೀರ್ಷಿಕೆ ಘೋಷಣೆ ಮಾಡಿದಾಗಲೇ ಪ್ರಿಯಾಂಕ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದ್ರೆ ಮದುವೆ ಸಂಬಂಧಿಸಿದ ಕೆಲಸಗಳಿಂದ ಗಂಗೂಬಾಯಿ ಕೋಟೆಯಿಂದಲೂ ಪ್ರಿಯಾಂಕ ಹೊರ ಬಂದಿದ್ದಾರಂತೆ. ಸದ್ಯ ಸಂಜಯ್ ಲೀಲಾ ಬನ್ಸಾಲಿ, ಬೇರೆ ನಟಿಯರ ಹುಡುಕಾಟದಲ್ಲಿ ಇದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ.

https://www.instagram.com/p/BmIL_LXn20E/?taken-by=viralbhayani

Share This Article
Leave a Comment

Leave a Reply

Your email address will not be published. Required fields are marked *