ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪ್ರಜಾಪ್ರಭುತ್ವದ ಕೊಲೆಗಾರರು. ಅವರು ದೇಶದಲ್ಲಿ ನಿಧಾನವಾಗಿ ಅಸಹಿಷ್ಣುತೆಯನ್ನು ಹಬ್ಬಿಸುತ್ತಿದ್ದಾರೆ ಎಂದು ತೆಲುಗು ಸಾಹಿತಿ ಓಲ್ಗಾ ಆರೋಪಿಸಿದ್ದಾರೆ.
ಶನಿವಾರ ನಡೆದ ಮೇ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಅಮಿತ್ ಶಾ, ನರೇಂದ್ರ, ಮೋದಿ ಹಾಗೂ ಬಿಜೆಪಿಯವರು ಕ್ರೈಂಗಳನ್ನು ಮಾಡುತ್ತಿದ್ದಾರೆ. ಆದರೆ ಅದಕ್ಕೆ ಯಾವುದೇ ಉತ್ತರ ಕೊಡುತ್ತಿಲ್ಲ. ಒಂದು ಕಾಲದ ಬಹುತ್ವ ಭಾರತ ಹಾಗೂ ರಾಷ್ಟ್ರೀಯತೆ ಇವರಿಂದಾಗಿ ಹಿಂದೂತ್ವ ಭಾರತ ಸಿದ್ಧಾಂತಕ್ಕೆ ವಾಲುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ಕ್ರೀಯಾಶೀಲ ಬರಹಗಾರರು ಬಿಜೆಪಿ ನಡೆಯನ್ನು ಗಮನಿಸುತ್ತಾ ಜಾಗೃತರಾಗುತ್ತಿದ್ದಾರೆ. ಹಿಂದೂತ್ವ ಭಾರತ ಸಿದ್ಧಾಂತ ಇಂದು ಕಸದಬುಟ್ಟಿಗೆ ಸೇರಬೇಕಿದ್ದು, ಬಹುತ್ವ ಭಾರತ ಹಾಗೂ ರಾಷ್ಟ್ರೀಯತೆಗಳು ಮಂಚೂಣಿಗೆ ಬರಬೇಕು ಎಂದು ಅವರು ಹೇಳಿದ್ದಾರೆ.