ಇನ್ಮುಂದೆ ಹುಚ್ಚನ ರೀತಿ ಆಡಲ್ಲ, ಗಲಾಟೆಯೂ ಮಾಡಲ್ಲ: ಹುಚ್ಚ ವೆಂಕಟ್

Public TV
1 Min Read

-ಆರ್ಥಿಕವಾಗಿ ಕಷ್ಟದಲ್ಲಿದ್ದೀನಿ, ಅಪ್ಪನ ದುಡ್ಡು ಹಾಳು ಮಾಡಿದೆ

ಬೆಂಗಳೂರು: ಇನ್ಮುಂದೆ ಹುಚ್ಚನ ರೀತಿ ಆಡಲ್ಲ. ಯಾರ ಜೊತೆಯೂ ಗಲಾಟೆ ಮಾಡಿಕೊಳ್ಳಲ್ಲ ಎಂದು ನಟ ಹುಚ್ಚ ವೆಂಕಟ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಚ್ಚ ವೆಂಕಟ್, ಜನರು ನನ್ನ ಹತ್ತಿರ ಬರೋದಕ್ಕೂ ಹೆದರುತ್ತಿದ್ದಾರೆ. ಹಾಗಾಗಿ ಮನಸ್ಸಿಗೆ ನೋವಾಗಿದ್ದು, ಯಾರೊಂದಿಗೆ ಗಲಾಟೆ ಮಾಡಿಕೊಳ್ಳಲ್ಲ. ಶೂಟಿಂಗ್ ಹೋದ ವೇಲೆ ಕೆಲ ದುರ್ಘಟನೆಗಳು ನಡೆದಿದ್ದರಿಂದ ಗಲಾಟೆ ಮಾಡಿದೆ. ಅಪ್ಪನ ದುಡ್ಡು ಹಾಳು ಮಾಡಿ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ಇನ್ನು ಮೇಲೆ ಸಂಪಾದನೆ ಮಾಡುತ್ತೇನೆ. ಈ ಹಿಂದೆ ಹಲವು ತಪ್ಪುಗಳನ್ನು ಮಾಡಿದ್ದು, ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡರು.

ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಹೆದರುತ್ತಿದ್ದಾರೆ. ನನ್ನ ಬಳಿ ಬಂದ್ರೆ ನಾನು ಹೊಡ್ತೀನಿ ಅಂತ ಹೇಳುವದನ್ನು ಕೇಳಿಸಿಕೊಂಡಿದ್ದೇನೆ. ತಪ್ಪು ನೋಡಿದ್ರೆ ಕೋಪ ಬರುತ್ತೆ. ಈಗ ಯಾರ ಮೇಲೆಯೂ ಕೋಪವಿಲ್ಲ. ಬಿಗ್‍ಬಾಸ್ ಮನೆಗೆ ಪ್ರವೇಶ ನೀಡಿದ್ರೂ ಹೋಗ್ತೀನಿ. ಒಂದು ದಿನ ಅಥವಾ ಒಂದು ಗಂಟೆಯ ಅವಕಾಶ ನೀಡಿದ್ರೆ, ಸ್ಪರ್ಧಿಗಳಿಗೆಲ್ಲ ಶುಭಾಶಯ ತಿಳಿಸುತ್ತೇನೆ ಎಂದರು.

ಸಿನಿಮಾ ಆಫರ್, ಅತಿಥಿ ಪಾತ್ರ, ಯಾವುದಾದ್ರೂ ರಿಯಾಲಿಟಿ ಶೋ ಇದ್ದರೂ ಬಂದು ಕೆಲಸ ಮಾಡುತ್ತೇನೆ. ಹಳೆಯ ಹುಚ್ಚ ವೆಂಕಟ್ ನನ್ನು ಮರೆತು ಬಿಡಿ. ನಾನು ಬದಲಾಗಿದ್ದು, ಎಲ್ಲ ಘಟನೆಗಳು ನಡೆದಿದ್ದು ಆಕಸ್ಮಿಕ. ಸಿನಿಮಾ ಮಾಡೋದಕ್ಕೆ ಅಪ್ಪ ದುಡ್ಡು ಕೊಡ್ತೀನಿ ಅಂದಿದ್ದವರು ಕೊಡಲಿಲ್ಲ. ಹಾಗಾಗಿ ನನ್ನ ಕಾರ್ ಗ್ಲಾಸ್ ನನ್ನು ಒಡೆದಿದ್ದೇನೆ. ಯಾವುದೇ ಖಾಸಗಿ ಕಾರ್ಯಕ್ರಮ, ಮದುವೆಗಳು ಬಂದರೂ ಬರುತ್ತೇನೆ. ಬಿಗ್‍ಬಾಸ್ ಮನೆಗೆ ಹೋಗಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಮಾನಸಿಕ ಮತ್ತು ದೈಹಿಕವಾಗಿಯೂ ಫಿಟ್ ಆಗಿದ್ದೇನೆ. ಯಾವಾಗ ಔಟ್ ಆಗ್ತೀನಿ ಎಂಬುವುದು ಗೊತ್ತಿಲ್ಲ. ಜನರ ಪ್ರೀತಿಗಾಗಿ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಸಮಾಜ ನನ್ನನ್ನು ಸ್ವೀಕರಿಸಿದ್ದು, ನಿಂತಿರುವ ಸಿನಿಮಾಗಳನ್ನು ಆರಂಭಿಸುತ್ತೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *