ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ (Police Department) ಅತ್ಯುತ್ತಮ ಸೇವೆಗಾಗಿ ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ್ ಅವರಿಗೆ ರಾಷ್ಟ್ರಪತಿ ಪದಕ (President Medal) ಲಭಿಸಿದೆ. ಅಲ್ಲದೇ 16 ಪೊಲೀಸರಿಗೆ ಮತ್ತು ಮೂವರು ಅಗ್ನಿಶಾಮಕ ದಳದ (Fire Service) ಸಿಬ್ಬಂದಿಗೆ ಸಹ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
79ನೇ ಸ್ವಾತಂತ್ರ್ಯ ದಿನೋತ್ಸವದ ಮುನ್ನಾ ದಿನವಾದ ಇಂದು (ಗುರುವಾರ) ಪದಕ ವಿಜೇತರ ಹೆಸರುಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದರಲ್ಲಿ 233 ಸಿಬ್ಬಂದಿಗೆ ವಿಶಿಷ್ಟ ಸೇವಾ ಪದಕ, 99 ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಹಾಗೂ 758 ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ ಘೋಷಣೆಯಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಇದೊಂದು ಖಾಲಿ ಡಬ್ಬ, ದೊಡ್ಡ ಷಡ್ಯಂತ್ರ ನಡೆದಿದೆ: ಡಿಕೆಶಿ
ಪದಕ ಘೋಷಣೆಯಾದ ರಾಜ್ಯದ ಅಧಿಕಾರಿಗಳು
ಡಾ.ಚಂದ್ರಗುಪ್ತ, ಐಜಿಪಿ
ಡಾ.ರಾಮಕೃಷ್ಣ ಮುದ್ದೆಪಾಲ್, ಕಮಾಂಡಂಟ್
ಕೆ.ಎಂ. ಶಾಂತರಾಜು, ಎಸ್ಪಿ
ಕಲಾ ಕೃಷ್ಣಸ್ವಾಮಿ, ಎಸ್ಪಿ
ವೆಂಕಟೇಶ ನಾರಾಯಣಪ್ಪ, ಎಸ್.ಪಿ
ಝಾನ್ಸಿ ರಾಣಿ, ಎಸ್ಐ
ಪ್ರವೀಣ ಬಾಬು ಗುರುಸಿದ್ದಯ್ಯ. ಇನ್ಸ್ಪೆಕ್ಟರ್
ಪ್ರಕಾಶ್ ರಾಥೋಡ್, ಎಸಿಪಿ
ಎಡ್ರಿನ್ ಪ್ರದೀಪ್ ಸ್ಯಾಮ್ರನ್. ಇನ್ಸ್ಪೆಕ್ಟರ್
ಸತೀಶ್ ಸದಾಶಿವಯ್ಯ ಬೆಟ್ಟಹಳ್ಳಿ, ಇನ್ಸ್ಪೆಕ್ಟರ್
ಶಾಂತಾರಾಮ, ಇನ್ಸ್ಪೆಕ್ಟರ್
ಸುಜನ ಶೆಟ್ಟಿ, ಎಎಸ್ಐ
ಗುರುರಾಜ ಮಹಾದೇವಪ್ಪ ಬೂದಿಹಾಳ, ಎಎಸ್ಐ
ರಾಕೇಶ್ ಎಂ.ಜಿ., ಹೆಡ್ ಕಾನ್ಸ್ಟೆಬಲ್
ಶಂಶುದ್ದೀನ್, ಹೆಡ್ ಕಾನ್ಸ್ಟೆಬಲ್
ವೈ. ಶಂಕರ್, ಹೆಡ್ ಕಾನ್ಸ್ಟೆಬಲ್
ಅಲಂಕಾರ ರಾಕೇಶ್, ಹೆಡ್ ಕಾನ್ಸ್ಟೆಬಲ್
ರವಿ .ಎಲ್ ಹೆಡ್ ಕಾನ್ ಸ್ಟೆಬಲ್