ಚಾಮುಂಡೇಶ್ವರಿ ದೇವಿಯ 57 ಅಡಿ ಎತ್ತರದ ಪಂಚಲೋಹದ ವಿಗ್ರಹ ಪ್ರತಿಷ್ಠಾಪಿಸಲು ಸಿದ್ಧತೆ

Public TV
1 Min Read

ರಾಮನಗರ: ರಾಜ್ಯದಲ್ಲಿಯೇ ಅತೀ ಎತ್ತರದ ನಾಡದೇವತೆ ಚಾಮುಂಡೇಶ್ವರಿ ದೇವಿಯ 57 ಅಡಿ ಎತ್ತರದ ಪಂಚಲೋಹದ ವಿಗ್ರಹವನ್ನು ರಾಮನಗರ ಜಿಲ್ಲೆಯ -ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಲಾಗ್ತಿದೆ.

ಗೌಡಗೆರೆಯಲ್ಲಿನ ಐತಿಹಾಸಿಕ ಹಾಗೂ ವಿಖ್ಯಾತ ಚಾಮುಂಡೇಶ್ವರಿ ಹಾಗೂ ಬಸವಣ್ಣನ ದೇವಾಲಯದ ಆವರಣದಲ್ಲಿ ಪಂಚಲೋಹ ವಿಗ್ರಹ ಪ್ರತಿಷ್ಠಾಪನೆಗೆ ಕಾರ್ಯ ನಡೆಸಲಾಗ್ತಿದೆ. ದೇವಾಲಯದ ಬಸವಣ್ಣ ಈಗಾಗಲೇ ರಾಜ್ಯದಾದ್ಯಂತ ಅಲ್ಲದೇ ಹೊರರಾಜ್ಯಗಳಲ್ಲೂ ಸಹ ಪ್ರಸಿದ್ಧಿ ಪಡೆದುಕೊಂಡಿದೆ.

ಪಂಚಲೋಹಗಳನ್ನು ಒಳಗೊಂಡ 57 ಅಡಿ ಎತ್ತರ ಚಾಮುಂಡೇಶ್ವರಿ ವಿಗ್ರಹ ಭೂಮಿಯ ಮೇಲ್ಭಾಗದಲ್ಲಿ ಹಾಗೂ ತಳಭಾಗದಲ್ಲಿ ಸುಮಾರು 20 ಅಡಿಯ ಪೀಠವನ್ನು ನಿರ್ಮಿಸಲಾಗ್ತಿದೆ. 35 ರಿಂದ 40 ಕಲಾವಿದರು ಈ ವಿಗ್ರಹ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿದ್ದು ಈಗಾಗಲೇ ಶೇ. 30ರಷ್ಟು ಕಾರ್ಯ ನೆರವೇರಿದೆ.

ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ದೇವಿಯ ವಿಗ್ರಹವನ್ನು ನಿರ್ಮಾಣ ಮಾಡಲಾಗ್ತಿದೆ. ದೇವಿಯ ವಿಗ್ರಹ ಕಾರ್ಯಕ್ಕೆ ಭಕ್ತಾದಿಗಳು ತಮ್ಮಲ್ಲಿನ ಹಳೆಯ ಪಂಚಲೋಹಗಳನ್ನು ದಾನವಾಗಿ ನೀಡಲು ದೇವಾಲಯದ ಧರ್ಮದರ್ಶಿಗಳು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *