ತನ್ನ ಭಾವಿ ಪತ್ನಿಯನ್ನು ಸಿಎಂ ಸಿದ್ದರಾಮಯ್ಯ ಪತ್ನಿಗೆ ಹೋಲಿಸಿದ ಪ್ರಥಮ್

Public TV
2 Min Read

ದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದ ನಟ ಪ್ರಥಮ್ (Pratham), ಇದೀಗ ಮತ್ತೊಂದು ವಿಷಯವನ್ನು ಹಂಚಿಕೊಂಡಿದ್ದಾರೆ. ತಮ್ಮ ಪತ್ನಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)  ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರ ಪತ್ನಿಗೆ ಹೋಲಿಸಿದ್ದಾರೆ. ‘ನನ್ನ ಕೈಹಿಡಿಯುವವರು ಸೋಷಿಯಲ್ ಮೀಡಿಯಾ ಮತ್ತು ಪಬ್ಲಿಸಿಟಿಯಿಂದ ದೂರ. ಒಂದು ರೀತಿಯಲ್ಲಿ ಸಿದ್ದರಾಮಯ್ಯ ಮತ್ತು ರವಿಚಂದ್ರನ್ ಅವರ ಹೆಂಡ್ತಿ ತರಹ ಅಂದ್ಕೊಳ್ಳಿ’ ಎಂದು ಹೆಂಡತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ.

ಭಾವಿ ಪತ್ನಿಯ ಸಿಂಪ್ಲಿಸಿಟಿ ಬಗ್ಗೆ ಹಾಡಿ ಹೊಗಳಿರುವ ಪ್ರಥಮ್, ಹಳ್ಳಿ ಹುಡುಗಿಯನ್ನು ಮದುವೆ (Marriage) ಆಗುತ್ತಿರುವ ಕುರಿತು ಹೆಮ್ಮೆಯಿಂದ ಮಾತನಾಡಿದ್ದಾರೆ. ಮಂಡ್ಯ ಮೂಲದ ಭಾನುಶ್ರೀ ಎನ್ನುವವರ ಜೊತೆ ಸಪ್ತಪದಿ ತುಳಿಯಲು ರೆಡಿಯಾಗಿರುವ ಪ್ರಥಮ್, ತಾನು ಇನ್ಮುಂದೆ ಮಂಡ್ಯದ ಅಳಿಯ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಭಾನುಶ್ರೀ ಡಿಗ್ರಿ ಮುಗಿಸಿರುವ ಹುಡುಗಿ, ಮುಂದಿನ ದಿನಗಳಲ್ಲಿ ಡಬಲ್ ಡಿಗ್ರಿ ಕೂಡ ಮಾಡಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ದೇವಸ್ಥಾನದಲ್ಲಿ ಮದುವೆ ಆಗುವ ಇಂಗಿತವನ್ನೂ ವ್ಯಕ್ತ ಪಡಿಸಿರುವ ಪ್ರಥಮ್, ಈ ಮದುವೆ ಮಾಡೋ ವಿಚಾರದಲ್ಲಿ ಹುಡುಗಿ ಮನೆಯವರಿಗೆ ಬಿಟ್ಟಿದ್ದಾರೆ. ‘ಮದುವೆ ಅವ್ರು ಹೇಗೇ ಮಾಡುತ್ತಾರೋ ಅವರಿಷ್ಟ. ನನಗೆ ದೇವಸ್ಥಾನದಲ್ಲಿ ಆಗುವ ಆಸೆ, ಅವ್ರಿಷ್ಟದಂತೆ ಅವ್ರು ಮಾಡ್ಲಿ ಬಿಡಿ’ ಎಂದು ಹೇಳಿಕೊಂಡಿದ್ದಾರೆ.  ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್ ಬೀಗರ ಊಟ. ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್ ವೆಜ್ ಊಟ ಇದಾಗಿರಬಹುದು. ಇದಿಷ್ಟೇ ನನ್ನ ಮದುವೆಯ ಮೆನು. ನೀವು ಹರಸಿ ಎಂದು ಪ್ರಥಮ್ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಕುಟುಂಬಕ್ಕೆ ಸೊಸೆಯಾಗಿ ಬರುತ್ತಿರುವ ಲಾವಣ್ಯ ಜಾತಿ ಬಗ್ಗೆ ತಲೆಕೆಡಿಸಿಕೊಂಡ ಫ್ಯಾನ್ಸ್

ಪ್ರಥಮ್, ಮಂಡ್ಯ ಮೂಲದ ಭಾನುಶ್ರೀ (Bhanushree) ವರಿಸಲಿದ್ದು, ಟ್ರೆಡಿಷನಲ್ ಫ್ಯಾಮಿಲಿಯ ಸಿಂಪಲ್ ಹುಡುಗಿಯನ್ನ ಪ್ರಥಮ್ ಮದುವೆಯಾಗುತ್ತಿದ್ದಾರೆ. ಕರ್ನಾಟಕದ ಅಳಿಯ ಇನ್ಮುಂದೆ ಮಂಡ್ಯದ ಅಳಿಯ. ಮಂಡ್ಯ ಮೂಲದ ಭಾನುಶ್ರೀ ಜೊತೆ ಪ್ರಥಮ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ನಿನ್ನೆ ಸಂಜೆ ಮಂಡ್ಯ ಪಕ್ಕದ ಹಳ್ಳಿಯಲ್ಲಿ ಎರಡೂ ಫ್ಯಾಮಿಲಿಯ ಹಿರಿಯರ ಸಮ್ಮುಖದಲ್ಲಿ ಸಿಂಪಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾನುಶ್ರೀ ಡಿಗ್ರಿ ಮುಗಿಸಿ ಡಬಲ್ ಡಿಗ್ರಿ ಮಾಡೋಕೆ ತಯಾರಿ ನಡೆಸುತ್ತಿದ್ದಾರೆ. ಪ್ರಥಮ್ ಹಳ್ಳಿ ಹುಡುಗಿಯನ್ನು ಮದುವೆ ಆಗ್ತೀನಿ ಅಂತ ಹೇಳುತ್ತಿದ್ದರು. ಅದರಂತೆಯೇ ಬಡ ಕುಟುಂಬದ ಹುಡುಗಿಯನ್ನು ಒಳ್ಳೆಯ ಹುಡುಗ ಪ್ರಥಮ್ ಮದುವೆ ಆಗುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ ಹಂಚಿಕೊಂಡಿದ್ದಾರೆ.

 

ಸಿನಿಮಾ ಮಂದಿಯಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರಿಗೆ ಹೇಳಿದ್ದೇನೆ. ನನ್ನಾಕೆಗೆ ಧ್ರುವ ಸರ್ಜಾ ಅಂದ್ರೆ ಬಲು ಇಷ್ಟ. ಶಿವಣ್ಣ (Shivarajkumar) ಅಂದ್ರೂ ತುಂಬಾ ಗೌರವ ಇದೆ. ಅವರು ನಮ್ಮ ಮದುವೆಗೆ ಬರಬೇಕು ಅನ್ನೋದು ನನ್ನಾಕೆಯ ಆಸೆ ಆಗಿದೆ. ಅವರನ್ನ ಇನ್ವೈಟ್ ಮಾಡೋ ಪ್ಲಾನ್ ಇದೆ. ನಟ ಯಶ್(Yash), ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಮದುವೆಗೆ ಆಮಂತ್ರಣ ನೀಡುತ್ತೇನೆ ಎಂದು ಮಾತನಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗುತ್ತಿದೆ. ಡೇಟ್ ಇನ್ನೂ ಫಿಕ್ಸ್ ಆಗಿಲ್ಲ. ಆದ್ಮೇಲೆ ಸರಳವಾಗಿಯೇ ನಮ್ಮ ವಿವಾಹ ನೆರವೇರುತ್ತದೆ ಎಂದು ಪ್ರಥಮ್ ತಿಳಿಸಿದ್ದಾರೆ.

Share This Article