ಹೋರಾಟ ಮುಂದುವರೆಯುತ್ತೇ – ಫೇಸ್‍ಬುಕ್ ಲೈವ್‍ನಲ್ಲಿ ಭಾವುಕರಾದ ಪ್ರತಾಪ್ ಸಿಂಹ

Public TV
1 Min Read

ಬೆಂಗಳೂರು: ವಿಧಾನಸಭೆಯಲ್ಲಿ ಬಹುಮತಯಾಚಿಸದೆ ಸಿಎಂ ಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ವೇಳೆ ಭಾವುಕರಾಗಿದ್ದಾರೆ.

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆ ಏಕಾಂಗಿಯಾಗಿ ಕಾರಿನಲ್ಲಿ ಕುಳಿತು ಫೇಸ್‍ಬುಕ್ ಲೈವ್ ಮಾಡಿದ ಸಂಸದ ಪ್ರತಾಪ್‍ಸಿಂಹ. ಬಿಎಸ್‍ವೈ ಅವರು ಅಧಿಕಾರ ಕಳೆದುಕೊಂಡರು ಎಂದು ಅವರಿಗೆ ನೋವಾಗಿಲ್ಲ. ಆದರೆ ರಾಜ್ಯದ ಜನರ ಬಗ್ಗೆ ಕಂಡಿದ್ದ ಕನಸು ನುಚ್ಚು ನೂರಾಯ್ತು ಎಂಬ ನೋವಿದೆ ಎಂದು ಹೇಳಿದರು.

ಇಷ್ಟಾದರೂ ಬಿಎಸ್‍ವೈ ಅವರು ಸಮಚಿತ್ತ ಕಾಯ್ದುಕೊಂಡು, ಕಣ್ಣಲ್ಲಿ ನೀರು ಬಂದರೂ ಕಣ್ಣಿರಿಡದೆ ಸದನದಿಂದ ಹೊರ ನಡೆದರು. ಇಂದಿನ ಯಡಿಯೂರಪ್ಪ ಅವರ ಭಾಷಣ ಅಂದಿನ ವಾಜಪೇಯಿ ಅವರ ಭಾಷಣದಂತಿತ್ತು. ತಮ್ಮ ಭಾಷಣದ ಉದ್ದಕ್ಕೂ ಬಿಎಸ್‍ವೈ ಪ್ರಧಾನಿ ಮೋದಿ ಹಾಗೂ ರೈತರ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕಾರಣಾಂತರಗಳಿಂದ ನಾವು ಸರ್ಕಾರ ಉಳಿಸಿಕೊಂಡಿಲ್ಲ. ಆದರೆ ಈ ಮೈತ್ರಿ ಸರ್ಕಾರ 6 ತಿಂಗಳು ಇರುವುದಿಲ್ಲ. ಆಗ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಿಎಎಸ್‍ವೈ ಮತ್ತೆ ಸಿಎಂ ಆಗುತ್ತಾರೆ. ಅಲ್ಲಿಯವರೆಗೂ ನಾವೆಲ್ಲರು ಬಿಎಸ್‍ವೈ ಅವರಿಗೆ ಬೆಂಬಲಿಸೋಣ ಎಂದು ತಮ್ಮ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡ್ರು.

Share This Article
Leave a Comment

Leave a Reply

Your email address will not be published. Required fields are marked *