– ಸಂತೋಷ್ ಲಾಡ್, ಖರ್ಗೆಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ಸಿಂಹ
ಮೈಸೂರು: ನಿಮ್ಮಪ್ಪ ಮಲ್ಲಿಕಾರ್ಜುನ ಖರ್ಗೆ (Mallikarajun Kharge) ಅವರನ್ನೇ ಕಾಂಗ್ರೆಸ್ ಸಿಎಂ ಮಾಡಲಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ (Prathap Simha) ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಆರ್ಎಸ್ಎಸ್ ಅನ್ನು ಬ್ಯಾನ್ ಮಾಡಬೇಕು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಅವರು ಪ್ರತಿಕ್ರಿಯಿಸಿದರು. ಸದನದ ಒಳಗೆ ನೀವು ಪೈಲ್ಸ್ ಪ್ರಿಯಾಂಕ, ಸದನದ ಹೊರಗೆ ನೀವು ಕೂಗು ಮಾರಿ ಖರ್ಗೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ – 4ನೇ ಸ್ಥಾನಕ್ಕೆ ಜಿಗಿದ ಭಾರತ
ಆರ್ಎಸ್ಎಸ್ ಬ್ಯಾನ್ ಮಾಡ್ತೀರಾ? ನೀವು ಯಾರ ಮಗ ಎಂದು ಹೆಸರು ಇಟ್ಕೊಂಡಿದ್ದರಲ್ಲ ಅವರ ಕೈಯಲ್ಲೇ ಆಗಿಲ್ಲ. ಅವರು ಬ್ಯಾನ್ ಮಾಡಿದ್ರು, ಬಳಿಕ ಅಧಿಕಾರ ಕಳೆದುಕೊಂಡರು. ನೆಹರೂ ಕೂಡ ಬ್ಯಾನ್ ಮಾಡಿ ನಂತರ ಬ್ಯಾನ್ ವಾಪಸ್ ತೆಗೆದುಕೊಳ್ಳುವ ಅನಿವಾರ್ಯತೆ ಬಂತು. ನೆಹರೂ ಅವರ ಮರಿಮಗಳ ಹೆಸರು ಇಟ್ಕೊಂಡು ಏನು ಮಾಡಲು ಸಾಧ್ಯವಿಲ್ಲ. ಹೆಸರಿನಲ್ಲೂ ಸ್ವಂತಂತೆ ಇಲ್ಲ. ವ್ಯಕ್ತಿತ್ವದಲ್ಲೂ ಸ್ವಂತತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವದು ತಪ್ಪು ಕಲ್ಪನೆ: ಯತೀಂದ್ರ
ಆರ್ಎಸ್ಎಸ್ಸನ್ನು ಬೈದ್ರೆ ಅಧಿಕಾರ ಸಿಗಲ್ಲ
ಐಟಿಬಿಟಿ ಸಚಿವರಾಗಿ ನಿಮ್ಮ ಸಾಧನೆ ಹೇಳಿ. ಬೇರೆ ರಾಜ್ಯಗಳಿಗೆ ಕಂಪನಿಗಳು ಯಾಕೆ ಹೋಗುತ್ತಿದೆ ಹೇಳಿ. ನಿಮ್ಮ ಅಪ್ಪ ದೊಡ್ಡ ದೊಡ್ಡ ನಾಯಕರನ್ನ ಬಲಿ ಕೊಟ್ಟು ನಿಮ್ಮನ್ನ ಮಂತ್ರಿ ಮಾಡಿದ್ದಾರೆ. ಇದೇ ರೀತಿ ಕೂಗು ಮಾರಿ ರೀತಿ ಮಾತನಾಡುತ್ತಿದ್ರೆ, ನಿಮಗೆ ಒಳ್ಳೆಯದು ಆಗಲ್ಲ. ನಿಮ್ಮಪ್ಪನ್ನೇ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಇನ್ನೂ ನಿಮ್ಮನ್ನು ಸಿಎಂ ಮಾಡುತ್ತಾ? ಆರ್ಎಸ್ಎಸ್ ಅನ್ನು ಬೈದ್ರೆ ಅಧಿಕಾರ ಸಿಗಲ್ಲ ಎಂದು ಟೀಕಿಸಿದ್ದಾರೆ.
ಸಚಿವ ಸಂತೋಷ ಲಾಡ್ ಸಹ ಮೇಧಾವಿ ರೀತಿ ಮಾತನಾಡುತ್ತಾರೆ. ಮೋದಿಗೆ ನೀವು ಪಾಠ ಮಾಡುತ್ತೀರಾ? ಈ ದೇಶದ ಅರ್ಥ ವ್ಯವಸ್ಥೆಯನ್ನ ನಿರ್ವಹಣೆ ಮಾಡುವುದು ಸಂಡೂರು ಮೈನ್ಸ್ನಿಂದ ಅದಿರು ಕದ್ದು ಮಾರಾಟ ಮಾಡಿದ್ರಲ್ಲ ಆ ರೀತಿನಾ? ಒಂದು ಪರ್ಮಿಟ್ನಲ್ಲಿ 10 ಲಾರಿ ಅದಿರು ಸಾಗಿಸಿ ದುಡ್ಡು ಮಾಡಿದ್ದಂಗೆ ಅಲ್ಲ, ದೇಶದ ಆರ್ಥಿಕತೆ ಎಂದು ಕಿಡಿಕಾರಿದ್ದಾರೆ.
ಲಾಡ್ ಅವರೇ ನಿಮಗೆ ಅರ್ಥ ವ್ಯವಸ್ಥೆಯ ಬಗ್ಗೆ ಕನಿಷ್ಟ ಜ್ಞಾನ ಇಲ್ಲ. ಒಂದು ಲೈಸೆನ್ಸ್ನಲ್ಲಿ ನೂರಾರು ಲಾರಿ ಓಡಿಸಿದ್ರಲ್ಲ, ಆ ರೀತಿ ಅಲ್ಲ ಅಧಿಕಾರ ನಡೆಸುವುದು. ಲಾಡ್ ಅವರೇ ಪ್ರತಿನಿತ್ಯ ಕಾ, ಕಾ ಅಂತೀರಲ್ಲ, ನಿಮ್ಮ ಜಿಲ್ಲೆಯಲ್ಲಿ ಕಾಗೆಗಳು ಇಲ್ಲ. ನಿಮ್ಮ ಜಿಲ್ಲೆಯ ಆಸ್ಪತ್ರೆಯ ಅವ್ಯವಸ್ಥೆಯನ್ನ ನೋಡಿದ್ದೀರಾ ಲಾಡ್ ಅವರೇ? ಮೈನಿಂಗ್ ದುಡ್ಡಿನಲ್ಲಿ ಬಡವರ ಮದ್ವೆ ಮಾಡಿಸಿ ಬಿಟ್ಟರೆ ಅದು ದೊಡ್ಡ ಸಾಧನೆನಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾನು ಬಾಸ್ಕೆಟ್ಬಾಲ್ ಪ್ಲೇಯರ್, ಸ್ಪೋರ್ಟ್ಸ್ಗೆ ಹೈಟ್ ಮ್ಯಾಟರ್ ಆಗಲ್ಲ: ರಮ್ಯಾ
ಬಹಿರಂಗ ಚರ್ಚೆಗೆ ಆಹ್ವಾನ
ದೇಶದ ಆರ್ಥಿಕತೆ, ಕರ್ನಾಟಕದ ಆರ್ಥಿಕತೆ ಬಗ್ಗೆ ಚರ್ಚೆ ಮಾಡೋಣ ಬನ್ನಿ. ಬಹಿರಂಗ ಚರ್ಚೆಯಲ್ಲಿ ನಿಮ್ಮನ್ನ ಸೋಲಿಸುತ್ತೇನೆ. ಪಾಯಿಂಟ್ ಟು ಪಾಯಿಂಟ್ ಚರ್ಚೆ ಮಾಡುತ್ತೇನೆ. ಯಾವ ಚಾನಲ್ನಲ್ಲಿ ಆದರೂ ಸರಿ ಅಥವಾ ಬಹಿರಂಗವಾಗಿಯಾದರೂ ಸರಿ ಚರ್ಚೆಗೆ ಬನ್ನಿ ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ.