ಅಮಿತಾಭ್ ಬಚ್ಚನ್ ಅವರನ್ನ ಪ್ರಶಾಂತ್‌ನೀಲ್ ಭೇಟಿಯಾಗಿದ್ದು ಏಕೆ?

Public TV
1 Min Read

ಬಾಲಿವುಡ್ ಮತ್ತು ಸೌತ್ ಚಿತ್ರರಂಗದ ತಾರೆಯರಾದ ಅಮಿತಾಭ್ ಬಚ್ಚನ್, ಪ್ರಭಾಸ್, ದುಲ್ಕರ್ ಸಲ್ಮಾನ್, ಪ್ರಶಾಂತ್ ನೀಲ್, ಮತ್ತು ನಾನಿ ಇತ್ತೀಚೆಗೆ ಖಾಸಗಿ ಪಾರ್ಟಿವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜತೆಗೆ ಬಿಗ್‌ಬಿ ಅವರನ್ನು ʻಕೆಜಿಎಫ್ 2ʼ ನಿರ್ದೇಶಕ ಪ್ರಶಾಂತ್ ನೀಲ್ ಭೇಟಿಯಾಗಿದ್ದು, ಅಭಿಮಾನಿಗಳ ವಲಯದಲ್ಲಿ ಕುತೂಹಲ ಮೂಡಿಸಿದೆ.

ವೈಜಯಂತಿ ನಿರ್ಮಾಣ ಸಂಸ್ಥೆಗೆ 50 ವರ್ಷ ತುಂಬಿದ ಬೆನ್ನಲ್ಲೇ ಹೈದರಾಬಾದ್‌ನಲ್ಲಿ ಹೊಸ ಕಛೇರಿಗೆ ಚಾಲನೆ ಕೊಡಲಾಗಿದೆ. ಹೆಸರಾಂತ ಸಂಸ್ಥೆ ವೈಜಯಂತಿ 50 ವರ್ಷದ ಸಂಭ್ರಮಕ್ಕೆ ಬಿಗ್‌ಬಿ, ಪ್ರಭಾಸ್, ದುಲ್ಕರ್, ಪ್ರಶಾಂತ್ ನೀಲ್, ನಾನಿ ಇವರೆಲ್ಲೂ ಸಾಕ್ಷಿಯಾಗಿದ್ದಾರೆ. ಜತೆಗೆ ಹೆಸರಾಂತ ಸಂಸ್ಥೆ ಶುಭಹಾರೈಸಿದ್ದಾರೆ. ಈ ಎಲ್ಲಾ ಬಿಗ್ ಸ್ಟರ‍್ಸ್ ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ:ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

ಪ್ರಸ್ತುತ ಅಮಿತಾಭ್,ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ವೈಜಯಂತಿ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ತೆಲುಗು ಮತ್ತು ಹಿಂದಿ ಏಕಕಾಲದಲ್ಲಿ ಸಿನಿಮಾ ತೆರೆ ಕಾಣಲಿದೆ. ಜತೆಗೆ ದುಲ್ಕರ್ ನಟನೆಯ `ಸೀತಾ ರಾಮಂ’ ಚಿತ್ರದ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *