ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಬಾರದೆಂಬ ರೂಲ್ಸ್ ಇದ್ಯಾ? ಪ್ರಮೋದ್ ಮುತಾಲಿಕ್

Public TV
1 Min Read

ಉಡುಪಿ: ದಸರಾ ವೇದಿಕೆಯಲ್ಲಿ ಪ್ರಪೊಸ್ ಮಾಡಬಾರದು ಎಂಬ ನಿಯಮವಿದೆಯೇ? ಇದ್ದರೆ ತೋರಿಸಿ ಎಂದು ಸಚಿವ ಸೋಮಣ್ಣಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

ಯುವ ದಸರಾ ವೇದಿಕೆಯಲ್ಲಿ ಗಾಯಕ ಚಂದನ್ ಮತ್ತು ನಟಿ ನಿವೇದಿತಾ ಗೌಡ, ಪ್ರಪೋಸ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿದರು. ಸರ್ಕಾರಿ ವೇದಿಕೆಯಲ್ಲಿ ಪ್ರಪೋಸ್ ಮಾಡಬಾರದೆಂಬ ನಿಯಮ ಎಲ್ಲಿದೆ? ಅನಾವಶ್ಯಕವಾಗಿ ಇದನ್ನು ಎಳೆಯಬೇಡಿ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಮೇಲೆ ಕೇಸು ಹಾಕಿದ್ದು ತಪ್ಪು. ಸಂದರ್ಭ ಬಂದಿದೆ ಪ್ರಪೋಸ್ ಮಾಡಿದ್ದಾರೆ, ಒಪ್ಪಿಕೊಂಡಿದ್ದಾರೆ, ಸುದ್ದಿಯಾಗಿದೆ. ಅದನ್ನೇ ಬಹಳ ದೊಡ್ಡ ಅಪರಾಧ ಎಂದು ಬಿಂಬಿಸುವುದು ಸರಿಯಲ್ಲ ಎಂದರು.

ಚಂದನ್ ನಿವೇದಿತಾರನ್ನು ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ ಎಂದಿರುವ ಸಚಿವ ಸೋಮಣ್ಣಗೆ ತಿರುಗೇಟು ನೀಡಿದ ಮುತಾಲಿಕ್, ನೂರಕ್ಕೆ ನೂರು ಚಂದನ್ ಮತ್ತು ನಿವೇದಿತಾಗೆ ಸಮಸ್ಯೆಯಾಗಲ್ಲ. ಇಬ್ಬರ ಮೇಲೆ ಚಾಮುಂಡೇಶ್ವರಿ ಆಶೀರ್ವಾದ ಇದೆ. ಇಷ್ಟಕ್ಕೂ ವೇದಿಕೆಯಲ್ಲಿ ಇಂತದ್ದು ಮಾಡಬಾರದು, ಇಂತದ್ದು ಮಾಡಬೇಕೆಂಬ ನಿಯಮಗಳಿದ್ದರೆ ಸೋಮಣ್ಣ ಅವರು ಹೇಳಲಿ. ಹೆಚ್ಚು ಎಳೆಯದೆ ಪ್ರಕರಣ ಮುಗಿಸಿಬಿಡಿ. ಕೇಸು ವಾಪಾಸ್ ಪಡೆಯಿರಿ. ಯುವ ಜೋಡಿಯ ದಾಂಪತ್ಯ ಜೀವನ ಸುಖಕರವಾಗಿ ನಡೆಯುತ್ತದೆ ಎಂದು ಮುತಾಲಿಕ್ ಹಾರೈಸಿದರು.

Share This Article
Leave a Comment

Leave a Reply

Your email address will not be published. Required fields are marked *