ಸುಳ್ಳಿನ ಸ್ಪರ್ಧೆ ಕಥೆ ಹೇಳಿ ಹೆಚ್‍ಡಿಕೆ, ಸಿದ್ದುಗೆ ಟಾಂಗ್ ಕೊಟ್ಟ ಜೋಶಿ

Public TV
1 Min Read

ಹಾವೇರಿ: ಮಾಜಿ ಸಿಎಂಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ‘ಸುಳ್ಳಿನ ಸ್ಪರ್ಧೆ’ಯಲ್ಲಿ ಭಾಗವಹಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಒಮ್ಮೆ ಸುಳ್ಳು ಹೇಳುವ ಸ್ಪರ್ಧೆ ನಡೆದಿತ್ತು. ಯಾರು ದೊಡ್ಡ ಸುಳ್ಳು ಹೇಳ್ತಾರೋ ಅವರಿಗೆ ಬಂಗಾರದ ಗಿಫ್ಟ್ ಇತ್ತು. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇಬ್ಬರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಕುಮಾರಸ್ವಾಮಿ ಹೇಳ್ತಾರೆ, ನಮ್ಮಜ್ಜ ಮನೆ ಮುಂದೆ 30 ವರ್ಷದಿಂದ ಒಂದು ಬಾವಿ ಇತ್ತು. ಆ ಬಾವಿಯಲ್ಲಿ ನಮ್ಮಜ್ಜನ ವಾಚ್ ಬಿದ್ದಿತ್ತು. ಮೊನ್ನೆ ಬಾವಿ ಸ್ವಚ್ಛ ಮಾಡಿದಾಗ ವಾಚ್ ಸಿಕ್ತು ಎಂದು ಅವರು ಹೇಳುತ್ತಾರೆ. ಕುಮಾರಸ್ವಾಮಿ ಅವರು ಆ ವಾಚ್ 30 ವರ್ಷ ಬಾವಿಯಲ್ಲಿದ್ರೂ ಸರಿಯಾಗಿ ನಡೆಯುತ್ತಿತ್ತು ಎಂದು ಭಾರೀ ಸುಳ್ಳು ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ – ಗೋ ಕಳ್ಳರು ಅರೆಸ್ಟ್

ಅದು ಅಲ್ಲದೇ ಸಿದ್ದರಾಮಯ್ಯ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ನಿಮ್ನಜ್ಜನ ವಾಚ್ ಬಿದ್ದ ಬಾವಿಯಲ್ಲೇ ನಮ್ಮಜ್ಜ ಬಿದ್ದಿದ್ದ. 30 ವರ್ಷ ಏನ್ಮಾಡ್ತಿದ್ದ ನಿಮ್ಮಜ್ಜ ಅಂತ ಹೆಚ್‍ಡಿಕೆ ಕೇಳಿದರೆ, ನಿಮ್ಮಜ್ಜನ ವಾಚ್‍ಗೆ ಕೀ ಕೊಡ್ತಾ ಇದ್ರು ನಮ್ಮಜ್ಜ ಎಂದು ಸಿದ್ದರಾಮಯ್ಯ ದೊಡ್ಡ ಸುಳ್ಳು ಹೇಳುತ್ತಾರೆ. ಹೀಗೆ ಜೋಶಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ‘ಸುಳ್ಳಿನ ಸ್ಪರ್ಧೆ’ ಕತೆ ಹೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಇವರಿಬ್ಬರೂ ಸುಳ್ಳು ಹೇಳೋರು. ಕಾಂಗ್ರೆಸ್, ಜೆಡಿಎಸ್ ನಾಯಕರು ಒಬ್ಬರಿಗಿಂತ ಒಬ್ಬರು ಸುಳ್ಳು ಹೇಳೋರು. ಇದು ಅವರಿಬ್ರೂ ಹೇಳುವ ಸುಳ್ಳಿನ ರೀತಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ – 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್

Share This Article
Leave a Comment

Leave a Reply

Your email address will not be published. Required fields are marked *