ಇಡೀ ಸ್ಮಶಾನವನ್ನೇ ಹೂದೋಟ ಮಾಡಿದ ಕೊಡಗಿನ ಪ್ರದೀಪ್

Public TV
1 Min Read

ಮಡಿಕೇರಿ: ಸ್ಮಶಾನ ಕಾಯ್ದ ಸತ್ಯ ಹರಿಶ್ಚಂದ್ರನ ಕಥೆ ನಿಮ್ಮಗೆಲ್ಲಾ ಗೊತ್ತಿದೆ. ಮಡಿಕೇರಿಯಲ್ಲೊಬ್ರು ಸತ್ಯ ಹರಿಶ್ಚಂದ್ರ ಇದ್ದಾರೆ. ಇಡೀ ಸ್ಮಶಾನವನ್ನೇ ಇವರು ಹೂದೋಟ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರೋ ಸ್ಮಶಾನವನ್ನ ಪ್ರದೀಪ್ ಎಂಬವರು ಹೂದೋಟ ಮಾಡಿದ್ದಾರೆ. ಪ್ರದೀಪ್ ಕಳೆದ 5 ವರ್ಷದಿಂದ ಸ್ಮಶಾನದ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಪ್ರಕೃತಿ ಬಗ್ಗೆ ವಿಶೇಷ ಕಾಳಜಿ ಇರುವ ಇವರು ಸ್ಮಶಾನದಲ್ಲಿ ಹೂವಿನ ಗಿಡಗಳನ್ನ ನೆಟ್ಟು ಪೋಷಿಸಿದ್ದಾರೆ.

ಸ್ಮಶಾನದ ಸುತ್ತ ಗೇಟ್ ನಿರ್ಮಿಸಿ ಪೋಲಿ ಪೋಕರಿಗಳಿಗೆ ಬ್ರೇಕ್ ಹಾಕಿದ್ದಾರೆ. ಸ್ಮಶಾನದಲ್ಲೇ ಇವರಿಗೆ ವಾಸಕ್ಕೆ ಮನೆಯನ್ನು ನಿರ್ಮಿಸಿಕೊಡಲಾಗಿದೆ. ಇವರ ಈ ನಿಸ್ವಾರ್ಥ ಸೇವೆ ಬಗ್ಗೆ ಸಾರ್ವಜನಿಕರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಪ್ರದೀಪ್ ಅವರ ಪ್ರಕೃತಿ ಮೇಲಿನ ವಿಶೇಷ ಪ್ರೀತಿಯಿಂದಾಗಿ ಸತ್ತ ಆತ್ಮಗಳಿಗೂ, ಇದು ಸ್ಮಶಾನವಲ್ಲದೇ ಸ್ವರ್ಗದಂತಾಗಿದೆ ಎಂದರೆ ತಪ್ಪಾಗಲಾರದು.

Share This Article
Leave a Comment

Leave a Reply

Your email address will not be published. Required fields are marked *