ಕಾಫಿನಾಡಿನ ದೇಗುಲದಲ್ಲಿ ಕನ್ನಡ ಡಿಂಡಿಮ

Public TV
1 Min Read

ಚಿಕ್ಕಮಗಳೂರು: ಇಂದು 64ನೇ ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದೆಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಕಾಫಿನಾಡಲ್ಲೊಂದು ವಿಶೇಷ ದೇಗುಲವಿದೆ. ಇಲ್ಲಿ ಪ್ರತಿನಿತ್ಯ ಕನ್ನಡ ಕಂಪು ಮೇಳೈಸಿದೆ.

ಚಿಕ್ಕಮಗಳೂರಿನ ಹಿರೇಮಗಳೂರಿನ ಕೋದಂಡರಾಮ ಸ್ವಾಮಿ ದೇಗುಲದಲ್ಲಿ ಕನ್ನಡ ಡಿಂಡಿಮ ಮೊಳಗುತ್ತಿದೆ. ಸಾಮಾನ್ಯವಾಗಿ ದೇಗುಲಗಳಲ್ಲಿ ಸಂಸ್ಕೃತದಲ್ಲಿ ಮಂತ್ರ ಹೇಳಿ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಕೋದಂಡರಾಮ ಸ್ವಾಮಿ ದೇಗುಲದಲ್ಲಿ ಮಾತ್ರ ಕನ್ನಡದಲ್ಲೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತೆ. ಹೀಗಾಗಿ ಈ ದೇಗುಲ ವಿಶೇಷವಾಗಿದೆ.

ಈ ದೇಗುಲದಲ್ಲಿ ಅರ್ಚಕರಾಗಿರೋ ಹಿರೇಮಗಳೂರು ಕಣ್ಣನ್ ಅವರು ಕನ್ನಡದಲ್ಲೇ ಕೋದಂಡರಾಮ ಸ್ವಾಮಿ ಪ್ರತಿದಿನ ಪೂಜೆ ಮಾಡುತ್ತಾರೆ. ನಿತ್ಯವೂ ಕನ್ನಡದಲ್ಲೇ ಮಂತ್ರ ಪಠಣ, ಹೋಮ, ಹವನ ಕೂಡ ನಡೆಯುತ್ತೆ. ಅಷ್ಟೇ ಅಲ್ಲದೆ ಇಲ್ಲಿ ನಡೆಯೋ ಮದುವೆಗಳನ್ನು ಕೂಡ ಕನ್ನಡದಲ್ಲೇ ಮಾಡಿಸೋದು ವಿಶೇಷ. ದೇಗುಲದ ಒಳಗಿನ ಗೋಡೆಗಳ ಮೇಲೂ ಕನ್ನಡ ಬರಹಗಳನ್ನು ಕಾಣಬಹುದಾಗಿದ್ದು, ಕನ್ನಡದಲ್ಲಿರುವ ಜೀವನ ಸಂದೇಶಗಳು ದೇವರ ದರ್ಶನಕ್ಕೆ ಬರುವ ಭಕ್ತಾದಿಗಳ ಗಮನ ಸೆಳೆದಿದೆ.

Share This Article
Leave a Comment

Leave a Reply

Your email address will not be published. Required fields are marked *