ತನ್ನ ಮಾತನ್ನ ನಿರ್ಲಕ್ಷಿಸಿದ್ದಕ್ಕೆ ನವ ವಿವಾಹಿತೆ ಆತ್ಮಹತ್ಯೆ

Public TV
1 Min Read

– ಬಾತ್‍ರೂಮಿನಲ್ಲಿ ಪತ್ನಿ ನೋಡಿ ಪತಿ ಆತ್ಮಹತ್ಯೆಗೆ ಯತ್ನ
– ಗಂಭೀರ ಸ್ಥಿತಿಯಲ್ಲಿ ಪತಿ

ಹೈದರಾಬಾದ್: ಪತಿ ತನ್ನ ಮಾತನ್ನು ನಿರ್ಲಕ್ಷಿಸಿದ್ದಕ್ಕೆ ಮನನೊಂದು ಬಾತ್‍ರೂಮಿನಲ್ಲಿ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವನಸ್ಥಾಲಿಪುರಂನಲ್ಲಿ ನಡೆದಿದೆ.

ಸೌಮ್ಯ ಆತ್ಮಹತ್ಯೆ ಮಾಡಿಕೊಂಡ ಪತ್ನಿ. ಸೌಮ್ಯ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಪತಿ ರಾಘವೇಂದರ್ ಕೂಡ ಬೆಡ್‍ರೂಮಿನಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಅಷ್ಟರಲ್ಲಿ ಕುಟುಂಬದವರು ನೋಡಿ ಆತನನ್ನು ರಕ್ಷಿಸಿದ್ದಾರೆ.

ಏನಿದು ಪ್ರಕರಣ?
ರಾಘವೇಂದರ್ ಹೈದರಾಬಾದ್‍ನ ಹರಿಹರಪುರಂ ಕಾಲೋನಿಯಲ್ಲಿ ವಾಸಿಸುತ್ತಿದ್ದನು. ಕೆಲವು ತಿಂಗಳ ಹಿಂದೆ ಯಾದಾದ್ರಿ ಭುವನಗಿರಿ ಜಿಲ್ಲೆಯ ಸೌಮ್ಯಾಳನ್ನು ಮದುವೆಯಾಗಿದ್ದನು. ಮದುವೆಯಾದ ಕೆಲವು ದಿನಗಳ ಇಬ್ಬರೂ ತುಂಬಾ ಸಂತೋಷದಿಂದ ಇದ್ದರು. ಆದರೆ ಪತಿಯ ಮನೆಯವರು ಸೌಮ್ಯಗೆ ಕಿರುಕುಳ ನೀಡಲು ಶುರು ಮಾಡಿದ್ದರು. ಈ ಬಗ್ಗೆ ಅವಳು ತನ್ನ ಪತಿಗೆ ಹೇಳಿದ್ದಾಳೆ. ಆದರೆ ರಾಘವೇಂದರ್ ಪತ್ನಿಯ ಮಾತುಗಳನ್ನು ನಿರ್ಲಕ್ಷಿಸಿದ್ದಾನೆ.

ಇಂದು ಬೆಳಿಗ್ಗೆ ಮತ್ತೆ ದಂಪತಿಯ ಮಧ್ಯೆ ಜಗಳವಾಗಿದೆ. ಇದರಿಂದ ನೊಂದ ಸೌಮ್ಯ ಬಾತ್‍ರೂಮ್‍ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಆದರೆ ತುಂಬಾ ಸಮಯದವರೆಗೂ ಬಾಗಿಲು ತೆರೆಯಲಿಲ್ಲ. ಇದರಿಂದ ಅನುಮಾನಗೊಂಡ ಪತಿ ರಾಘವೇಂದರ್ ಬಾತ್‍ರೂಮಿಗೆ ಹೋಗಿ ನೋಡಿದ್ದಾನೆ. ಅಲ್ಲಿ ಸೌಮ್ಯ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಸೌಮ್ಯ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ನಂತರ ರಾಘವೇಂದರ್ ಬೆಡ್‍ರೂಮಿಗೆ ಹೋಗಿ ನೇಣು ಹಾಕಿಕೊಂಡಿದ್ದಾನೆ. ಅಷ್ಟರಲ್ಲಿ ಕುಟುಂಬವರು ಬಂದು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ರಾಘವೇಂದರ್ ಸ್ಥಿತಿಯೂ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಇತ್ತ ಪತಿ ಮತ್ತು ಚಿಕ್ಕಮ್ಮ ಕಿರುಕುಳ ನೀಡಿದ್ದರಿಂದ ಸೌಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ವನಸ್ಥಾಲಿಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *