ನಟ ದರ್ಶನ್ ಮನೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್

Public TV
1 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamu Murder Case) ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಯಾಂಡಲ್‍ವುಡ್ ನಟ ದರ್ಶನ್ (Challenging Star Darshan) ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಆರ್ ಆರ್ ನಗರದಲ್ಲಿರುವ ದರ್ಶನ್ ಮನೆಯ ಎಡ ಹಾಗೂ ಬಲಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಈ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಗಾವಹಿಸಿದ್ದಾರೆ. ಅಲ್ಲದೇ ದರ್ಶನ್ ಮನೆಯ ಅಕ್ಕಪಕ್ಕದ ಮನೆಗೆ ಹೋಗುವ ಹಾಗೂ ಬರುವವರನ್ನು ಕೂಡ ಪೊಲೀಸರು ವಿಚಾರಿಸಿ ಕಳುಹಿಸುತ್ತಿದ್ದಾರೆ. ಇದನ್ನೂ ಓದಿ: Exclusive – ಪವಿತ್ರಾ ಗೌಡ ಒಬ್ಬರನ್ನ ಕೊಲೆ ಮಾಡ್ತಾಳೆ ಅಂದ್ರೆ ಅದು ಸುಳ್ಳು: ಮಾಜಿ ಪತಿ ಸಂಜಯ್‌ ಸಿಂಗ್‌

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಜನರನ್ನು ಬಂಧಿಸಲಾಗಿದೆ. ದರ್ಶನ್ ಬಂಧನವಾಗುತ್ತಿದ್ದಂತೆಯೇ ಅಭಿಮಾನಿಗಳು ನಟನ ಪರ ನಿಂತಿದ್ದಾರೆ. ಮೊನ್ನೆ ದರ್ಶನ್ ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆಯೇ ಠಾಣೆ ಮುಂಭಾಗ ಅಭಿಮಾನಿಗಳ ದಂಡೇ ನೆರೆದಿತ್ತು.

ಡಿ ಬಾಸ್‍ಗೆ ಜೈಕಾರ ಹಾಕಿದ್ದಾರೆ. ನಾವು ಯಾರು ಹೇಳಿ ದರ್ಶನ್ ಅಭಿಮಾನಿಗಳಾಗಿಲ್ಲ. ನಾವು ಅವರ ಒಳ್ಳೆಯ ಸಮಯದಲ್ಲಿ ಜೊತೆಗಿದ್ದೆವು, ಈಗಲೂ ಜೊತೆಗಿರುತ್ತೇವೆ ಎಂದು ರೊಚ್ಚಿಗೆದ್ದಿದ್ದಾರೆ. ಅಲ್ಲದೇ ತಡರಾತ್ರಿಯಾದರೂ ಠಾಣೆ ಮುಂಭಾಗವೇ ಜಮಾಯಿಸಿದ್ದರು. ಇನ್ನು ಕೊಲೆ ಪ್ರಕರಣ ಸಂಬಂಧ ಬುಧವಾರ ಸುಮ್ಮನಹಳ್ಲಿ ಮೋರಿ ಬಳಿ ಆರೋಪಿಗಳ ಸ್ಥಳ ಮಹಜರು ನಡೆಸಲಾಗಿತ್ತು. ಈ ವೇಳೆಯೂ ಅಭಿಮಾನಿಗಳು ದರ್ಶನ್ ನೋಡಲು ಬಂದಿದ್ದರು. ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಕೊನೆಗೆ ಲಾಠಿ ಪ್ರಹಾರ ನಡೆಸಬೇಕಾಯಿತು.

Share This Article