ನಾವು ಬೆಂಗ್ಳೂರು ಪೊಲೀಸರು, ಆಟವಾಡಿದ್ರೆ ಸುಮ್ಮನಿರಲ್ಲ: ಭಾಸ್ಕರ್ ರಾವ್ ವಾರ್ನಿಂಗ್

Public TV
1 Min Read

ಬೆಂಗಳೂರು: ನಾವು ಬೆಂಗಳೂರು ಪೊಲೀಸರು. ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ರೆ ಸಹಿಸಲ್ಲ ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಭಟನಾಕಾರರಿಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ. ನಾವು ಬೇರೆ ಕಡೆಯಂತೆ ಲಾಠಿಚಾರ್ಜ್ ಮಾಡಿಲ್ಲ. ಹಾಗಾಂತ ನಮ್ಮ ಮುಂದೆ ನಾಟಕ ಮಾಡಿದ್ರೆ ಹುಷಾರ್ ಅಂತ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.

ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಪ್ರಕರಣ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಭಾಸ್ಕರ್ ರಾವ್ ಇಂದು ಮಾಹಿತಿ ನೀಡಿದ್ರು. ಗೃಹ ಸಚಿವರ ಭೇಟಿ ಬಳಿಕ ಮಾತನಾಡಿದ ಅವರು, ನಾವು ಪ್ರತಿಭಟನೆಗಳಿಗೆ ಅವಕಾಶ ಕೊಡುತ್ತಾನೇ ಇದ್ದೇವೆ. ಯಾವುದೇ ಪ್ರತಿಭಟನೆಯಲ್ಲಿ ಹೀಗೆ ಆಗಿಲ್ಲ. ಕಾನೂನು ಸುವ್ಯವಸ್ಥೆ ಹಾಳು ಮಾಡುವ ಇಂತಹ ಕಾರ್ಯಕ್ರಮ ಸಹಿಸೋಕೆ ಸಾಧ್ಯವೇ ಇಲ್ಲ. ಮಾಡೋದೆಲ್ಲ ಮಾಡಿ ಏನು ಮಾಡಿಲ್ಲ ಅಂತ ನಾಟಕ ಮಾಡೋದು ಬೇಡ ಅಂತ ಕಾರ್ಯಕ್ರಮ ಆಯೋಜಕರಿಗೆ ತರಾಟೆಗೆ ತೆಗೆದುಕೊಂಡ್ರು.

ಪ್ರಕರಣಕ್ಕೆ ಸಂಬಂಧಿಸಿಂತೆ ಅಮೂಲ್ಯಳ ವಿರುದ್ಧ ದೇಶದ್ರೋಹದ ಕೇಸ್ ಹಾಕಲಾಗಿದೆ. ಮಾತ್ರವಲ್ಲ ಆಯೋಜಕರ ಮೇಲೆ ಕೇಸ್ ಹಾಕಿ ಅಗತ್ಯ ತನಿಖೆ ಮಾಡ್ತೀವಿ. ಯಾರನ್ನು ಕೂಡ ಸುಮ್ಮನೆ ಬಿಡೊಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವ ಕೃತ್ಯ ಮಾಡಿದ್ರೆ ನಾವು ಸಹಿಸಲ್ಲ ಅಂತ ಎಚ್ಚರಿಕೆಯ ಸಂದೇಶ ಕೊಟ್ಟಿದ್ದಾರೆ.

ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡೋವಾಗ ಹುಷಾರಾಗಿ ಇರಬೇಕು. ಜನರು ಇದ್ದಾರೆ ಎಂದು ಉದ್ರೇಕದ ಮಾತು ಆಡೋದು ಸರಿಯಲ್ಲ. ಅದನ್ನ ನೋಡಿ ಕಣ್ಣುಮುಚ್ಚಿ ಕುಳಿತಿಕೊಳ್ಳಲು ಆಗಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಬೇರೆ ಬೇರೆ ಕಡೆ ಪ್ರತಿಭಟನೆ ಆದಾಗ ಲಾಠಿ ಚಾರ್ಜ್ ಆಗಿದೆ. ಬೆಂಗಳೂರಿನಲ್ಲಿ ಅಂತಹ ಒಂದು ಘಟನೆ ಸಹ ಆಗಿಲ್ಲ. ನಿಮ್ಮ ಸ್ವಾರ್ಥಕ್ಕೆ ವೇದಿಕೆ ಬಳಸಿಕೊಂಡು ಕಾನೂನು ಸುವ್ಯವಸ್ಥೆ ಹಾಳು ಮಾಡಬೇಡಿ ಅಂತ ಸಂದೇಶ ರವಾನೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *