ಮೈಸೂರು: ಮನೆಗಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಂಗಸಮುದ್ರ ಗ್ರಾಮದ ಮನು, ಗವಿ, ಯೋಗೇಶ್, ಹಾಗೂ ಬೆಂಗಳೂರು ಕುಂಬಳಗೋಡು ನಿವಾಸಿ ಶಶಿಕುಮಾರ್ ಬಂಧಿತ ಆರೋಪಿಗಳು. ಜುಲೈ 7ರಂದು ರಂಗಸಮುದ್ರ ಗ್ರಾಮದ ವೀಣಾ ಅವರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದರು.
ಖಚಿತ ಮಾಹಿತಿ ಮೇರೆಗೆ ರಂಗಸಮುದ್ರ ಗೇಟ್ ಬಳಿ ಟಿ.ನರಸೀಪುರ ತಾಲೂಕಿನ ಬನ್ನೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 4.15 ಲಕ್ಷ ರೂ. ನಗದು, 18.5 ಗ್ರಾಂ ಚಿನ್ನಾಭರಣ ಹಾಗೂ 65 ಸಾವಿರ ರೂ. ಬೆಲೆಯ ನಾಲ್ಕು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.