ವಿಶೇಷ ದಿನ ಇನ್ನಷ್ಟು ವಿಶೇಷವಾಗಿದೆ: ಪ್ರೇಜಾವರ ಶ್ರೀ ಭೇಟಿ ಬಳಿಕ ಮೋದಿ ಮಾತು

Public TV
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಡುಪಿ ಪೇಜಾವರ ಶ್ರೀ ಅವರನ್ನು ಭೇಟಿ ಆಗಿದ್ದಾರೆ. ಅಲ್ಲದೆ ಈ ಬಗ್ಗೆ ಅವರು ಟ್ವೀಟ್ ಕೂಡ ಮಾಡಿದ್ದಾರೆ.

ದೆಹಲಿಯಲ್ಲಿ ಮೋದಿ ಅವರು ಪೇಜಾವರ ಶ್ರೀಗಳನ್ನು ಬರಮಾಡಿಕೊಂಡು ಅವರ ಜೊತೆ ಕೆಲ ಹೊತ್ತು ಕಾಲ ಕಳೆದಿದ್ದಾರೆ.

ಮೋದಿ ಅವರು ಶ್ರೀಗಳನ್ನು ಭೇಟಿ ಮಾಡಿರುವ ಫೋಟೋಗಳನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, ಈ ವಿಶೇಷ ದಿನ ಇನ್ನಷ್ಟು ವಿಶೇಷವಾಗಿದೆ. ಗುರು ಪೂರ್ಣಿಮಾ ದಿನದಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಷ ತೀರ್ಥ ಸ್ವಾಮೀಜಿ ಅವರ ಜೊತೆ ಕಾಲ ಕಳೆದಿದ್ದಕ್ಕೆ ಹೆಮ್ಮೆಯಾಯಿತು. ಅವರಿಂದ ಕಲಿಯುವುದು ಹಾಗೂ ಅವರ ಅಲೋಚನೆಗಳ ಬಗ್ಗೆ ಕೇಳುವುದು ಒಳ್ಳೆಯ ಅನುಭವ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *