ಜಮೀನಿನ ನೀರಾವರಿಗಾಗಿ ತರಿಸಿದ್ದ ಪೈಪ್ ಗಳು ಬೆಂಕಿಗಾಹುತಿ!

Public TV
0 Min Read

ರಾಯಚೂರು: ಜಮೀನಿನ ನೀರಾವರಿಗೆ ತರಿಸಿ ಇರಿಸಲಾಗಿದ್ದ ಪೈಪ್ ಗಳಿಗೆ ಬೆಂಕಿ ತಗುಲಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಮೇದಿನಾಪುರು ಗ್ರಾಮದಲ್ಲಿ ನಡೆದಿದೆ.

ರೈತ ಶಿವರಾಜ್ ಎಂಬವರಿಗೆ ಸೇರಿದ ಪೈಪ್ ಗಳು ಬೆಂಕಿಗಾಹುತಿ ಆಗಿವೆ. ಶಿವರಾಜ್ ಕೃಷ್ಣ ನದಿಯಿಂದ ಜಮೀನಿಗೆ ನೀರು ತರೋದಕ್ಕಾಗಿ ಪೈಪ್ ಲೈನ್ ಅಳವಡಿಸಲು ಮುಂದಾಗಿದ್ದರು. ಹೀಗಾಗಿ 66,500 ರೂ. ಖರ್ಚು ಮಾಡಿ ಪೈಪ್‍ಗಳನ್ನು ಖರೀದಿಸಿ ಜಮೀನಿನಲ್ಲಿ ಇರಿಸಿದ್ರು.

ಸುಮಾರು 380 ಪೈಪ್‍ಗಳಿಗೆ ಬೆಂಕಿ ತಗುಲಿವೆ ನಿರುಪಯುಕ್ತವಾಗಿವೆ. ಈ ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *