ಹೆಚ್‍ಡಿಕೆ ಬರೋವರೆಗೆ ಮದ್ವೆಯಾಗಲ್ಲವೆಂದು 2 ವರ್ಷದಿಂದ ಪಟ್ಟು- ಕೊನೆಗೂ ಆಸೆ ಈಡೇರಿಸಿಕೊಂಡ ವಿಕಲಚೇತನ ಅಭಿಮಾನಿ

Public TV
1 Min Read

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸುವವರೆಗೂ ಮದುವೆ ಆಗುವುದಿಲ್ಲ ಎಂದು ಪಟ್ಟು ಹಿಡಿದಿದ್ದ ವಿಕಲಚೇತನ ಅಭಿಮಾನಿಯೊಬ್ಬರು ಕೊನೆಗೂ ಹೆಚ್‍ಡಿಕೆ ಎದುರಲ್ಲಿ ಮದುವೆಯಾಗಿ ತನ್ನ ಆಸೆ ಈಡೇರಿಸಿಕೊಂಡ ವಿಶಿಷ್ಟ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದ ಶ್ರೀಶೈಲ್ ಲಮಾಣಿ ಎಂಬ ವಿಕಲ ಚೇತನ ವ್ಯಕ್ತಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ ಇಂದು ಕುಮಾರಸ್ವಾಮಿ ಅವರ ಮುಂದೆ ಮದುವೆ ಆಗುವ ಮೂಲಕ ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

ಶ್ರೀಶೈಲ್ ಕಳೆದ ಎರಡು ವರ್ಷಗಳಿಂದ ಕುಮಾರಸ್ವಾಮಿ ಅವರು ಬರುವವರೆಗೂ ಮದುವೆ ಆಗುವುದಿಲ್ಲ ಎಂದು ಪಟ್ಟು ಹಿಡಿದ್ದರು. ಇಂದು ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಶೈಲ್ ಮದುವೆಯಲ್ಲಿ ಭಾಗವಹಿಸಿ, ನವದಂಪತಿಗಳಾದ ಶ್ರೀಶೈಲ್ ಹಾಗೂ ಶಾರಾದಾ ಜೋಡಿಗೆ ಆಶಿರ್ವದಿಸಿದ್ರು. ಈ ಮೂಲಕ ಶ್ರೀಶೈಲ್ ತನ್ನ ಬಯಕೆ ಈಡೇರಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *