ಇಂದಿನಿಂದ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ: ಪ್ರತಿಭಟನೆ ಹೇಗಿರಲಿದೆ? ಬೇಡಿಕೆ ಏನು?

Public TV
1 Min Read

ಬೆಂಗಳೂರು: ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರ ಇಂದಿನಿಂದ ಪ್ರಾರಂಭವಾಗಿದೆ. ಇಂದು ಪೆಟ್ರೋಲ್ ಬಂಕ್‍ನಲ್ಲಿ ತೈಲ ಖರೀದಿ ಸ್ಥಗಿತ ಮಾಡಿದ್ದು, ಭಾನುವಾರ ಪೆಟ್ರೋಲ್ ಬಂಕ್ ಬಂದ್ ಮಾಡಿ ಹಂತ ಹಂತವಾಗಿ ಪ್ರತಿಭಟನೆ ಮಾಡಲಿದ್ದಾರೆ.

ಅಪೂರ್ವಚಂದ್ರ ಕಮಿಟಿ ವರದಿ ಜಾರಿಗೆ ಒತ್ತಾಯಿಸಿ ಮುಷ್ಕರದ ಹಾದಿ ಹಿಡಿರುವ ಪೆಟ್ರೋಲ್ ಬಂಕ್‍ನವರು ಮೇ 15 ರಿಂದ ಸಿಂಗಲ್ ಶಿಫ್ಟ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ವಾಹನ ಸವಾರರಿಗೆ ಮುಷ್ಕರದ ಬಿಸಿ ತಟ್ಟಲಿದೆ. ಅಲ್ಲದೇ, ಪ್ರತಿ ಭಾನುವಾರ ಪೆಟ್ರೋಲ್ ಬಂಕ್ ಬಂದ್ ಮಾಡಿ ಪ್ರತಿಭಟನೆ ಮುಂದುವರೆಸಲಿದ್ದಾರೆ.

ಪೆಟ್ರೋಲ್ ಬಂಕ್ ಮಾಲೀಕರ ಬೇಡಿಕೆಗಳೇನು..?
* ಅಪೂರ್ವ ಚಂದ್ರ ಕಮಿಟಿ ಜಾರಿ ಮಾಡಬೇಕು.
* ಜನವರಿ-ಜುಲೈ ಒಳಗೆ ಆರು ತಿಂಗಳೊಳಗೆ ಎಲ್ಲಾ ಬಿಲ್ಲುಗಳ ಪರಿಷ್ಕರಣೆಯಾಗಬೇಕು
* ಈಗ ಇರುವ ಕಮಿಷನ್ ಹೆಚ್ಚಳ ಮಾಡಬೇಕು
* ಪೆಟ್ರೋಲ್‍ಗೆ 15, ಡೀಸೆಲ್‍ಗೆ 10 ಪೈಸೆ ಕಮಿಷನ್ ಮಾಲೀಕರಿಗೆ ನೀಡಲು ಒತ್ತಾಯ.
* ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಾರದ ರಜೆ ಮಾಡಲು ತೀರ್ಮಾನಿಸಲಾಗಿದೆ
ಅಪೂರ್ವ ಚಂದ್ರ ಕಮಿಟಿ ಶಿಫಾರಸ್ಸುಗಳೇನು?:
ಪ್ರತಿ ಆರು ತಿಂಗಳಿಗೆ ಸಿಬ್ಬಂದಿ, ಮೂಲ ಸೌಕರ್ಯಗಳ ವೇತನ ಪರಿಷ್ಕರಣೆ ಮಾಡಬೇಕು
ಡೀಲರ್‍ಗಳಿಗೆ ಹೆಚ್ಚಿನ ಸೌಲಭ್ಯ ನೀಡಬೇಕು.
ಈಗ ಇರುವ ಕಮಿಷನ್ ಅನ್ನು ಹೆಚ್ಚಳ ಮಾಡಬೇಕು.

Share This Article
Leave a Comment

Leave a Reply

Your email address will not be published. Required fields are marked *