ಸಿಲಿಕಾನ್ ಸಿಟಿಯಲ್ಲಿ ನಾಯಿಯ ಪುಣ್ಯ ತಿಥಿ!

Public TV
0 Min Read

ಬೆಂಗಳೂರು: ಸಹಜವಾಗಿ ಮನುಷ್ಯರ ಪುಣ್ಯ ತಿಥಿ ನೋಡಿದ್ದೇವೆ ಆದರೆ ಬುಧವಾರ ಮಲ್ಲೇಶ್ವರಂ ಮನೆಯೊಂದರಲ್ಲಿ ನಾಯಿಯ ಪುಣ್ಯ ತಿಥಿಯನ್ನು ಮಾಡಿದ್ದಾರೆ.

ಮಾಲೀಕ ಅರುಣ್ ಅವರು 17 ವರ್ಷಗಳಿಂದಲೂ ಸಿಂಧೂ ಹೆಸರಿನ ನಾಯಿಯನ್ನು ಸಾಕಿದ್ದರು. 12 ಜುಲೈ 1999 ರಲ್ಲಿ ಜನಿಸಿದ ಸಿಂಧೂ, ಕಳೆದ 17 ಜುಲೈ 2017 ರಲ್ಲಿ  ಸಾವನ್ನಪ್ಪಿತ್ತು. ಅದರ ನೆನಪಿಗಾಗಿ ಅರುಣ್ ಈ ಪುಣ್ಯ ತಿಥಿ ಕಾರ್ಯವನ್ನು ಮಾಡಿದರು.

ಇಂದು ಸಂಪ್ರದಾಯ ಬದ್ಧವಾಗಿ, ವಿಧಿವಿಧಾನಗಳ ಮೂಲಕ ನಾಯಿಯ ಒಂದು ವರ್ಷದ ಪುಣ್ಯ ತಿಥಿಯನ್ನು ಅರುಣ್ ಮಾಡಿದ್ದಾರೆ. ವಿಶೇಷ ಏನೆಂದರೆ 100 ಕ್ಕೂ ಹೆಚ್ಚು ಜನರಿಗೆ ಅರುಣ್ ಊಟ ಹಾಕಿ ಪ್ರೀತಿಯ ನಾಯಿಯ ಪುಣ್ಯಸ್ಮರಣೆಯನ್ನು ಕೈಗೊಂಡರು.

Share This Article
Leave a Comment

Leave a Reply

Your email address will not be published. Required fields are marked *