ಕರಡಿ ದಾಳಿಯಿಂದ ವ್ಯಕ್ತಿ ಸಾವಿನ ಪ್ರಕರಣಕ್ಕೆ ಟ್ವಿಸ್- ಹೆಂಡ್ತಿಯ ಸಂಶಯದಿಂದ ಬಯಲಾಯ್ತು ಕೊಲೆ ರಹಸ್ಯ

Public TV
1 Min Read

ಕೊಪ್ಪಳ: ಕರಡಿ ದಾಳಿಯಿಂದ ಮೃತಪಟ್ಟಿದ್ದಾನೆ ಅಂತ ಬಿಂಬಿಸಲಾಗಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಅನೈತಿಕ ಸಂಬಂಧ ಹಿನ್ನಲೆಯಲ್ಲಿ ತನ್ನ ಚಿಕ್ಕಪ್ಪನನ್ನೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರೋ ಪ್ರಕರಣ ಕೊಪ್ಪಳದಲ್ಲಿ ಬಯಲಾಗಿದೆ.

ಕೊಪ್ಪಳ ತಾಲೂಕಿನ ಆಚಾರ್ ತಿಮ್ಮಾಪೂರ ಗ್ರಾಮದಲ್ಲಿ ಕಳೆದ ಅಕ್ಟೋಬರ್ 1 ರಂದು ಈ ಘಟನೆ ನಡೆದಿತ್ತು. ಹಿರೇಹನುಮಪ್ಪ ಹೊಸಮನಿ ಎಂಬಾತ ರಾತ್ರಿ ತೋಟದಲ್ಲಿ ಮಗಳು ವಿಶಾಲಾಕ್ಷಿಯೊಂದಿಗೆ ಮಲಗಿದ್ದಾಗ ಗಂಭೀರ ಗಾಯವಾಗಿ ಅನುಮಾನಸ್ಪದವಾಗಿ ಮೃತಪಟ್ಟಿದ್ದ. ಕರಡಿ ದಾಳಿಯಿಂದ ಆತ ಮೃತಪಟ್ಟಿದ್ದಾನೆ ಅಂತ ಬಿಂಬಿಸಲಾಗಿತ್ತು. ಬಳಿಕ ಮೃತನ ಪತ್ನಿ ಈ ಸಾವಿನ ಹಿಂದೆ ಸಂಶಯವಿದೆ ಅಂತ ದೂರು ಕೊಟ್ಟಿದ್ರು. ಬಳಿಕ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಕೊಲೆಯಾಗಿದೆ ಅನ್ನೋದು ಗೊತ್ತಾಗಿದೆ.

ಆರೋಪಿ ಯಮನೂರಪ್ಪ ಹೊಸಮನಿಯ ಪತ್ನಿಯೊಂದಿಗೆ ಹಿರೇಹನಮಪ್ಪ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಯಮನೂರಪ್ಪನಿಗೆ ಹಿರೇಹನಮಪ್ಪ ಚಿಕ್ಕಪ್ಪನಾಗಬೇಕು. ಅಂದ್ರೆ ಸೊಸೆಯೊಂದಿಗೆ ಈತ ಅನೈತಿಕ ಸಂಬಂಧ ಇಟ್ಟುಕೊಂಡಿರೋದು ಯಮನೂರಪ್ಪನಿಗೆ ಗೊತ್ತಾಗಿದೆ. ಇದೇ ವಿಷಯವಾಗಿ ಈ ಹಿಂದೆ ಇವರಿಬ್ಬರ ನಡುವೆ ಜಗಳವಾಗಿದ್ದು, ಆಗ ಯಮನೂರಪ್ಪ ನಿನ್ನನ್ನ ಮುಗಿಸೋದು ಗ್ಯಾರಂಟಿ ಅಂತ ಹಿರೇಹನಮಪ್ಪನಿಗೆ ಬೆದರಿಕೆ ಕೂಡಾ ಹಾಕಿದ್ದ ಎನ್ನಲಾಗಿದೆ.

ಮೀನುಗಾರಿಕೆ ಮಾಡಲು ಊರುಬಿಟ್ಟು ಹೋಗಿದ್ದ ಆರೋಪಿ ಯಮನೂರಪ್ಪ ಅಕ್ಟೋಬರ್ 1 ರಂದು ತಡರಾತ್ರಿ ಹುಸೇನಸಾಬ ಎಂಬವನೊಂದಿಗೆ ಸೇರಿ ಕೊಡಲಿ, ಕಟ್ಟಿಗೆಯಿಂದ ಹೊಡೆದು ಹಿರೇಹನಮಪ್ಪ ನನ್ನು ಕೊಲೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ವಿಶಾಲಾಕ್ಷಿಯ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದರು. ಇದೀಗ ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣವನ್ನ ಬೇಧಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *